Saturday, July 28, 2018

ಬಾರಿಸು ಕನ್ನಡ ಡಿಂಡಿಮವ

ಹಾಡು : ಬಾರಿಸು ಕನ್ನಡ ಡಿಂಡಿಮವ 
ರಚನೆ : ಕುವೆಂಪು 
ಗಾಯನ : ಶಿವಮೊಗ್ಗ ಸುಬ್ಬಣ್ಣ 

ಬಾರಿಸು ಕನ್ನಡ ಡಿಂಡಿಮವ 
ಓ ಕರ್ನಾಟಕ ಹೃದಯಶಿವ 
ಬಾರಿಸು ಕನ್ನಡ ಡಿಂಡಿಮವ 

ಸತ್ತಂತಿಹರನು ಬಡಿದೆಚ್ಚರಿಸು 
ಕಚ್ಚಾಡುವರನು ಕೂಡಿಸಿ ಒಲಿಸು 
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು 
ಒಟ್ಟಿಗೆ ಬಾಳುವ ತೆರದಲಿ ಹರಸು 

ಬಾರಿಸು ಕನ್ನಡ ಡಿಂಡಿಮವ  

ಚೈತ ಶಿವೇತರ ಕೃತಿ ಕೃತಿಯಲ್ಲಿ 
ಮೂಡಲಿ ಮಂಗಳ ಮತಿ ಮತಿಯಲ್ಲಿ 
ಕವಿ  ಋಷಿ ಸಂತರ ಆದರ್ಶದಲಿ 
ಸರ್ವೋದಯವಾಗಲಿ ಸರ್ವರಲಿ 

ಬಾರಿಸು ಕನ್ನಡ ಡಿಂಡಿಮವ 


ಉಳಿದವರು ಕಂಡಂತೆ - ಘಟ್ಟದ ಅಂಚಿದಾಯೇ

ಚಲನಚಿತ್ರ : ಉಳಿದವರು ಕಂಡಂತೆ   
ಗಾಯಕರು : ವಿಜಯ್ ಪ್ರಕಾಶ್, ಬಿ. ಅಜನೀಶ್ ಲೋಕನಾಥ್.   
ನಟನೆ : ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ತಾರಾ     

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ. 

ಘಾಟಿಯಾ ಇಳಿದು, ತೆಂಕಣ ಬಂದೂ,   
ಅವಳಾ ನೋಡಿ ನಿಂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,     
ಕೇಳದ ಪಿಸುಮಾತಿಗಿವನು ಮರುಳನಾದನೂ..
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨ ಸಲ). 

ಮನದ ಹಿಂದಾರಿಲಿ ಬರದೇ ಕವಲು,   
ಆ ಕವಲು ದಾರಿಗೆ ಕಾವಲಾ ?,
ಮರುಭೂಮಿಯಲಿ ಹೆಜ್ಜೆಯ ಗುರುತು,   
ಆ ಗುರುತೇ ನಿನ್ನಯ ನೆರಳಾ ?

ಮನಸಾ ಬಿಚ್ಚಿಟ್ಟವನ, ಬರೆಯಲು ಮೌನದ ಕವನಾ,   
ಪದಗಳೆ ಇಲ್ಲದ ಸಾಲ, ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚನೂ.. 

ವೇಷಧಾರಿ: ಅಕ್ಕ ಎಯಿನ ಮೀನು ಉಂಡು.
ಯಜ್ಞ:  ಭೂತಾಯಿ, ಬಂಗುಡೆ.
ವೇಷಧಾರಿ: ಭೂತಾಯಿ ದಾನೆ ಫ಼್ರೆಶಾ ?
ಯಜ್ಞ: ಅನ್ದ್. ತೂಲೆ. 

ಸಮಯ ಸಾಗುವ ಗತಿಯ,   
ತಡೆಯುವ ಪರಿಯಾ, ನಾ ಕಾಣೆನೂ,
ಕಳೆವಾ ಸನಿಹದ ಕ್ಷಣವಾ,   
ಮೌನದ ಸ್ವರವಾ ಕೂಡಿಡುವೆನೂ. 
ಶ್ರಾವಣ ಕಳೆದೂ, ಮರಳನು ಅಳೆದೂ,   
ದೂರವ ಸವಿದು ಕೂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,   
ಕೇಳದ ಪಿಸುಮಾತಿಗಿವನು ಮರುಳನಾದನೂ.
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨). 

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ.