Tuesday, September 21, 2021

ಭಕ್ತಿ ಗೀತೆಗಳು

-: ಭಕ್ತಿ ಗೀತೆ :- 

ಪೂಜಿಸಲೆಂದೇ ಹೂಗಳ ತಂದೆ 

ದರುಶನ ಕೋರಿ ನಾ ನಿಂದೆ।। ತೆರೆಯೋ 

ಬಾಗಿಲನು ರಾಮ ।।ಪೂಜಿಸಲೆಂದೇ ।।


ಮೋಡದ ಮೇಲೆ ಚಿನ್ನದ ನೀರು 

ಚೆಲ್ಲುತ ಸಾಗಿದೆ ಹೊನ್ನಿನ ತೇರು

ಮಾಣಿಕ್ಯದಾರುತಿ ಉಷೆ ತಂದಿಹಳು 

ತಾಮ ಸವರನ್ನು ಸ್ವಾಮಿ ತೆರೆಯೋ 

ಬಾಗಿಲನು ರಾಮ ।।ಪೂಜಿಸಲೆಂದೇ।।


ಒಲಿದರು ಚೆನ್ನ ಮುನಿದರೂ ಚೆನ್ನ 

ನಿನ್ನಾಸರೆಯ ಬಾಳಿಗೆ ಚೆನ್ನ 

ನಾ ನಿನ್ನ ಪಾದದ ಧೂಳಾದರು ಚೆನ್ನ 

ಸ್ವೀಕರಿಸು ನನ್ನ ಸ್ವಾಮಿ ತೆರೆಯೋ 

ಬಾಗಿಲನು ರಾಮ್ ।।ಪೂಜಿಸಲೆಂದೇ।।

**********************************************************************************  

-: ಭಕ್ತಿ ಗೀತೆ :- 


ಎಂಥ ಅಂದ ಎಂಥ ಚೆಂದ ಶಾರದಮ್ಮ 

ನಿನ್ನ ನೋಡಲೆರೆಡು ಕಣ್ಣು  ನನಗೆ ಸಾಲದಮ್ಮ 

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ 

ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ ।।೧।।


ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ 

ನಿನ್ನ ಪಾದ ಕಮಲದಲ್ಲಿ ಶಿರವು ಬಾಗಿತಮ್ಮ 

ಎಂಥ ಶಕ್ತಿ ನಿನ್ನಲಿದೆ ಶಾರದಮ್ಮ 

ನಿನ್ನ ನೋಡುವಾಸೆ ನನಗೆ ಬಂದಿತಮ್ಮ ।।೨।।


ರತ್ನದಂಥ ಮಾತುಗಳನು ಆಡಿಸಮ್ಮ 

ಒಳ್ಳೆ ರಾಗ ಭಾವ ಭಕ್ತಿ ಹಾಡಿಸಮ್ಮ 

ಅಲ್ಲಿ ಇಲ್ಲಿ ಓಡೋ ಆಸೆ ನಮ್ಮದಮ್ಮ 

ಬೇಗ ಬಂದು ನೆಲೆಸು ಇಲ್ಲಿ ಶಾರದಮ್ಮ 

ಬೇರೆ ಏನು ಬೇಕು ಎಂದು ಕೇಳೆನಮ್ಮ 

ನಮ್ಮ ನೆನಪಿಗೆ ತಂತಿ ಮಾಡಿ ನುಡಿಸು ಶಾರದಮ್ಮ ।।೩।।

**********************************************************************************  

-: ಭಕ್ತಿ ಗೀತೆ :- 

ತಾಯಿ ಶಾರದೆ ಲೋಕ ಪೂಜಿತೆ 

ಜ್ಞಾನದಾತೆ ನಮೋಸ್ತುತೇ 

ಪ್ರೇಮದಿಂದಲಿ ಸಲಹು ಮಾತೇ 

ನೀಡು ಸನ್ಮತಿ ಸೌಖ್ಯದಾತೆ ।।


ಅಂಧಕಾರವ ಓಡಿಸು 

ಜ್ಞಾನ ಜ್ಯೋತಿಯ ಬೆಳಗಿಸು 

ಹೃದಯ ಮಂದಿರದಲ್ಲಿ ನೆಲೆಸು 

ಚಿಂತೆಯ ಅಳಿಸು ಶಾಂತಿಯ ಉಳಿಸು ।।


ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ 

ನಿನ್ನ ಕರುಣೆಯ ಬೆಳಗಲಮ್ಮ ನಮ್ಮ ಕೋರಿಕೆ ಆಲಿಸಮ್ಮ 

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು 

ಒಳ್ಳೆ ದಾರಿಯಲೆಮ್ಮ ನಡೆಸು 

ವಿದ್ಯೆಯ ಕಲಿಸು ಆಸೆ ಪೊರೈಸು ।।೨।।

**********************************************************************************  

-: ಗುರು ರಾಘವೇಂದ್ರ ಭಕ್ತಿ ಗೀತೆ :- 

ರಾಯರ ಕಂಡಿರಾ ಶ್ರೀ ರಾಘವೇಂದ್ರನ ಕಂಡಿರಾ 

ಮಂತ್ರಾಲಯದಲ್ಲಿ ವಾಸಿಪರಿವರು 

ಮೂಲ ರಾಮನ ಪೂಜಿಪರಿವರು 

ಭಕ್ತರ ಸಲಹುವ ರಾಯರು ಇವರು 

ಮುಕ್ತಿಯ ಪಡಿಸುವ ಗುರುಗಳು ಇವರು ।।೧।।


ಪ್ರಥಮದಲ್ಲಿ ಪ್ರಹ್ಲಾದರಾಯರು 

ದ್ವೀತಿಯದಲ್ಲಿ ಶ್ರೀ ವ್ಯಾಸರಾಯರು 

ಶ್ರೇಷ್ಠ ಪುರಂದರ ಭಕ್ತರು ಇವರು 

ರಾಯರ ಕಂಡಿರಾ ಶ್ರೀ ರಾಘವೇಂದ್ರನ ಕಂಡಿರಾ।।೨।।

********************************************************************************** 

-: ಭಕ್ತಿ ಗೀತೆ :- 

ಫಕ್ಕೀರೇಶ ಬಂದಾನ ಬಾಗಿಲಲಿ ನಿಂತಾನ

ಮುತ್ತಿನ ಆರುತಿ ಎತ್ತಿ ಬಾ ಎಂದು ಕರೆಯಿರಿ 

ಬಾ ಎಂದು ಕರೆಯಿರಿ ಬಾಲೆಯರು ಬನ್ನಿರೆ 

ಪನ್ನೀರ ತನ್ನಿರಿ ಪಾದವ ತೊಳೆಯಿರಿ ।।ಪ।।


ಹರಗುರುವು ಬಂದಾನ ಹಜರತ್ ಬಂದಾನ 

ಶಿರಹಟ್ಟಿ ಫಕ್ಕಿರೇಶ ಬಾಗಿಲಿಗೆ ಬಂದಾನ 

ಮನೆ ಹಸನ ಮಾಡಿರೆ ತೋರಣದ ಕಟ್ಟಿರೆ 

ಬಾ ಎಂದು ಮನೆಗೆ ಕರೆಯಿರಿ ಚರಣ ತೊಳೆದು ಪೂಜಿಸಿರೆ ।।೧।।


ಶಿವನ ಅವತಾರಿ ಅವನು ಶಿರಹಟ್ಟಿ ಫಕ್ಕೀರೇಶ 

ಶ್ರೀ ಫಕ್ಕೀರೇಶನಿಗೆ ನಮಿಸಿ ಪತ್ರಿಪುಷ್ಪವ ಧರಿಸಿ 

ಭಸ್ಮ ಗಂಧವ ಹಚ್ಚಿ ಕರ್ಪೂರದಾರುತಿ ಬೆಳಗಿರೆ ।।೨।।


ಮಾಂಗಲ್ಯ ಸ್ಥಿರವಾಗಿ ಎಂದೆಂದೂ ಬೆಳಕಾಗಿ 

ವಂಶದ ಕುಡಿ ಚಿಗುರಿ ಬಾಳು ಹಸನಾಗಿ 

ಎಂದೆಂದೂ ಆರದ ನಂದಾದೀಪವು ತನಗಾಗಿ 

ಇರುವಂತೆ ಹರಸೆಂದು ವರವನ್ನು ಬೇಡೋಣ ।।೩।।

********************************************************************************** 

-: ಭಕ್ತಿ ಗೀತೆ :- 

ಮೃಡಹರಿ ಹಯಮುಖ ರೋಡೆಯೊಳೆ ನಿನ್ನಯಾ

ಅಡಿಗಡಿಗೆರಗುವೆ ಅಮ್ಮ ಬ್ರಹ್ಮನರಾಣೆ 

ಕೊಡುಬೇಗ ದಿವ್ಯಮತಿ ಸರಸ್ವತಿ 

ಕೊಡುಬೇಗ ದಿವ್ಯಮತಿ ।।ಪ।।


ಇಂದಿರ ರಮಣರ ಹಿರಿಯ ಸೊಸೆಯು 

ನೀನು ಬಂದೆನ್ನ ವದನದಲಿ ಸಿಂಧು 

ನಾಮವ ನುಡಿಸಿ ಕೊಡುಬೇಗ ದಿವ್ಯಮತಿ 

ಸರಸ್ವತಿ ಕೊಡುಬೇಗ ದಿವ್ಯಮತಿ ।।೧।।


ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ 

ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ 

ಕೊಡುಬೇಗ ದಿವ್ಯಮತಿ ಸರಸ್ವತಿ 

ಕೊಡುಬೇಗ ದಿವ್ಯಮತಿ ।।೨।।


ಪತಿತ ಪಾವನೆ ನೀನು ಗತಿಯೆಂದು 

ನಂಬಿದೆ ಸತತ ಪುರಂದರ ವಿಠಲನ

ಆರಾಧಿಸೆ ಕೊಡುಬೇಗ ದಿವ್ಯಮತಿ 

ಸರಸ್ವತಿ ಕೊಡುಬೇಗ ದಿವ್ಯಮತಿ ।।೩।।

**********************************************************************************


Thursday, September 9, 2021

ಇಟಗಿ ಶ್ರೀ ಮೂಕಾಂಬಿಕೆ ಹಾಡು, ಮಂಗಳಾರುತಿ, ಪ್ರಾರ್ಥನೆ,

ಇಟಗಿ ಶ್ರೀ ಮೂಕಾಂಬಿಕೆ ಹಾಡು  

ಮುಡಿಸಿದರೂ ಮಲ್ಲಿಗೆಯಾ 

ಇಟಗಿ ಭೀಮಾಂಭಿಕೆಗೆ

ಭೂವಿಲೋಕ ಬೆಳಗುವ 

ಭಾಗ್ಯದ ದೇವಿಗೆ 

 ಮುಡಿಸಿದರೂ ಮಲ್ಲಿಗೆಯಾ 


ಹನುಮಮ್ಮಳ ಗರ್ಭದಲ್ಲಿ 

ಜನಿಸಿದ ಶಿವಶಕ್ತಿಗೆ 

ಸೋಮಣ್ಣನ ಮಗಳಾಗಿ 

ಧರೆಗಿಳಿದ ತಾಯಿಗೆ 

ಮುಡಿಸಿದರೂ ಮಲ್ಲಿಗೆಯಾ 


ಧರ್ಮದ ಮನೆತನದಿ 

ಮುತ್ತಾದ ಶ್ರೀದೇವಿಗೆ

ಹಾಲುಮತದ ಕೀರ್ತಿಯ 

ಬೆಳಗಿದ ಶಕ್ತಿಗೆ 

ಮುಡಿಸಿದರೂ ಮಲ್ಲಿಗೆಯಾ 


ನಾಗಲಿಂಗ ಶರೀಫರಿಗೆ 

ಬುತ್ತಿ ಉಣಿಸಿ ತೃಪ್ತಿಪಡಿಸಿದೆ 

ಅನ್ನಪೂರ್ಣೀ ಅವತಾರ

ತಾಳಿದ ದೇವಿಗೆ 

ಮುಡಿಸಿದರೂ ಮಲ್ಲಿಗೆಯಾ 


ಕೂತಬಾಳ ಗುರುಸಿದ್ಧನ ಮಡದಿ

ಹಿಲಿಬ್ಯಾನಿಯಿಂದ ಬಳಲಿದಾಗ 

ಕರ್ಪೂರ ತಿನ್ನಿಸಿ 

ಬೇನೆ ಕಳೆದ ತಾಯಿಗೆ

ಮುಡಿಸಿದರೂ ಮಲ್ಲಿಗೆಯಾ 


ರುದ್ರಭಟ್ಟ ಬ್ರಾಹ್ಮಣನು 

ಬಡತನದಿ ಬೆಂದುಬರಲು 

ತುಳಸಿ ಪೂಜೆ ಮಾಡಿಸಿ

ಸಿರಿವಂತ ಲಕ್ಷ್ಮೀಗೆ 

ಮುಡಿಸಿದರೂ ಮಲ್ಲಿಗೆಯಾ 


ಎಚ್ಚರವ್ವ ಪಂಪಣ್ಣ 

ಬೇಡಿ ಬರಲು ಸಂತಾನ 

ನೂಲುವ ಕದಿಯ ನೀಡಿ 

ಮಗು ಕೊಟ್ಟ ಮಾತೆಗೆ 

ಮುಡಿಸಿದರೂ ಮಲ್ಲಿಗೆಯಾ 


ಮಳೆಯನ್ನು ತರಿಸಿದವಳು 

ಮನುಕುಲದಿ ನೆಲೆಸಿದವಳು 

ಭೂಮಾತೆಯ ರೂಪದಲ್ಲಿ 

ಭವಗೆ ಕಳೆದ ದೇವಿಗೆ 

ಮುಡಿಸಿದರೂ ಮಲ್ಲಿಗೆಯಾ 


ನಂಬಿ ಬಂದ ಭಕುತರಿಗೆ 

ಕರವ ಹಿಡಿದು ನಡೆಸುವವಳು

ನೆನೆದವರ ಮನದಲ್ಲಿ 

ಇರುವಂತ ತಾಯಿಗೆ 

ಮುಡಿಸಿದರೂ ಮಲ್ಲಿಗೆಯಾ

***********************************************************************************

ಮಂಗಳಾರುತಿ:

ಜ್ಞಾನಪೂರ್ಣಮ್ ಜಗಂ ಜ್ಯೋತಿ 

ನಿರ್ಮಲವಾದ ಮನವೇ ಕರ್ಪೂರದಾರುತಿ 

ಅನುದಿನ ಗುರುವಿನ ಅನುರಾಗ ಭಕ್ತಿಯಲಿ 

ಜನನ ಮರಣರಹಿತ ಜಂಗಮಗೆ ಬೆಳಗಿರಿ ।।ಪ।।


ನಾನೀನೆಂಬುದು ಬಿಡಿರೋ ನರಕವೇ ಪ್ರಾಪ್ತಿ 

ಜ್ಞಾನಿ ಒಳನಾಡಿರೋ ಸ್ವಾನುಭ ಒದಸುಖ 

ತಾನಕ್ಕೆ ಸಾಲದು ಅನುಭವ ಲಿಂಗಕ್ಕೆ 

ಮನವೊಪ್ಪಿ ಬೆಳಗಿರಿ  

ಜ್ಞಾನಪೂರ್ಣಮ್ ಜಗಂ ಜ್ಯೋತಿ।।ಪ ।।


ಅಷ್ಟವರ್ಣದ ಸ್ತೂಲವು ಈ ಮಾನವ ಜನ್ಮ 

ಹುಟ್ಟಿ ಬರುವುದು ದುರ್ಲಭವೋ 

ಕೊಟ್ಟಾನು ಶಿವನಮಗೆ ಮಾಡಿದ ಫಲದಿಂದ 

ಹುಟ್ಟಿದ ಮಗನೆಸರು ಶಿವ ಎಂದು ಕರೆಯಿರಿ ।।ಪ ।।


ಜ್ಞಾನಪೂರ್ಣಮ್ ಜಗಂ ಜ್ಯೋತಿ

ನಿರ್ಮಲವಾದ ಮನವೇ ಕರ್ಪೂರದಾರುತಿ

***********************************************************************************

ಪ್ರಾರ್ಥನೆ :

ನಿನ್ನೊಲುಮೆ ನಮಗಿರಲಿ ತಂದೆ 

ಕೈ ಹಿಡಿದು ನೀ ನಡೆಸು ಮುಂದೆ ।।


ನಿನ್ನ ಈ ಮಕ್ಕಳನ್ನು ಪ್ರೇಮದಲಿ ನೀ ನೋಡು 

ಈ ಶಾಲೆ ಎಂದೆಂದೂ ನಗುವಂತೆ ನೀ ಮಾಡು 


ನಂಬಿದರೆ ಭಯವಿಲ್ಲ ನಂಬದಿರೆ ಬಾಳೆಲ್ಲ 

ಅಂಬಿಗನೆ ನೀ ನಡೆಸು ಈ ಬಾಳ ನೌಕೆ 

ಯಾವ ನೋವೇ ಬರಲಿ ಎದೆಗುಂದದಿರಲಿ 

ಸತ್ಯ ಮಾರ್ಗದಿ ನಡೆವ ಶಕ್ತಿ ಕೊಡು ತಂದೆ ।।ಪ ।।


ಕಾನನದ ಸುಮವೊಂದು ಸೌರಭವ ತಾ ಸೂಸಿ 

ಸಫಲತೆಯ ಪಡೆವಂತೆ ಮಾಡೆನ್ನ ತಂದೆ 

ಸಿರಿಯೂ ಸಂಪದ ಬೇಡ ಯಾವ ವೈಭವ ಬೇಡ 

ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ ।।ಪ।।


ಓಂ ಗಜಾನನ ವಿಘ್ನಹರಣ 

ಸಕಲ ಪಾಪ ವಿಮೋಚನಾ।।


ಸರ್ವಕಾರ್ಯ ಸುಮಂಗಲ 

ಕಾರ್ಯಪಾವನ ನಿರ್ಮಲಾ 

ಶುಭರ್ಶಿವಾದವೇ ಜ್ಞಾನಕೆ 

ನಿತ್ಯ ನೂತನ ಉಜ್ವಲ ।।ಪ ।।


ವಿದ್ಯೆಯಾಗರ ಬುದ್ಧಿ ಸಾಗರ 

ಜ್ಞಾನದೀಪ ವಿದ್ಯಾಧರ 

ಆದರ್ಶವೈ ನಿನ್ನ ಸದ್ಗುಣ 

ಸಕಲ ಕಾರ್ಯಕೆ ಕಾರಣ।।ಪ ।।


ಕಾರ್ಯಸಿದ್ಧಿ ವಿನಾಯಕ 

ಶೌರ್ಯ ಬುದ್ಧಿ ಪ್ರದಾಯಕ 

ಸೌಮ್ಯಮೂರುತಿ ಶುಭಕರ 

ಶರಣು ಶರಣು ಲಂಬೋದರ ।। ಪ ।।


Saturday, September 4, 2021

ಭಕ್ತಿ ಗೀತೆ

ನಾ ಅರ್ಪಿಪೆ ಶಾರದೆಗೆ ವರನೀಡು ಭಕ್ತರಿಗೆ 

ಕೊಡು ನಮಗೆ ಸುಜ್ಞಾನ ಕಳೆ ಎಲ್ಲ ಅಜ್ಞಾನ 

ಭವರೋಗ ಕಳೆದು ನೀ ಹರಿಸಮ್ಮ ನಮ್ಮ ನೀ ।।ಪ।।


ನಿರ್ಮಲವಾದ ಮನಸ್ಸಿನಿಂದ ನಿನ್ನ ಬೇಡುವೆ 

ನೀನು ದಯವ ಬೀರದೆ ಹೋದರೆ ನಾನು ಬೆದರುವೆ 

ಕಣ್ ಬಿಟ್ಟು ನೋಡುವಾನೆ ನಮ್ಮ ಕಷ್ಟವ 

ಧರೆಗೆ ಬಂದು ನೆಲೆಸು ತಾಯಿ ಎಂದು 

ಬೇಡುವಾ ನಾ ಎಂದು ಬೇಡುವಾ... ।।೧।।


ಶುಕ್ರವಾರದಿ ಶಾರದೆ ನಿನ್ನ ಪೂಜೆಗೈವೆವು 

ಸತ್ಯ ಧರ್ಮ ನೀತಿ ನಿನ್ನ ಪಾದ ಕಮಲವು 

ನಮ್ಮ ಹೃದಯ ಮಂದಿರದಲ್ಲಿ  ಬಂದು ನೆಲೆಸು 

ಅಂಧಕಾರ ನೀಗಿ ಜ್ಞಾನ ಜ್ಯೋತಿ ಬೆಳಗಿಸು 

ನೀ ಜ್ಯೋತಿ ಬೆಳಗಿಸು ।।೨।।


ನಿನ್ನ ಮಡಿಲಿನ ಮಕ್ಕಳನ್ನು ಎತ್ತಿ ಆಡಿಸು 

ಒಳ್ಳೆ ಮಾತು ಒಳ್ಳೆ ಕೆಲಸ ನೀನು ಕಲಿಸು

ವಿದ್ಯಾ ಬುದ್ಧಿ ಕಳಿಸಿ ನಮ್ಮ ಆಸೆ ಪೂರೈಸು 

ನಮ್ಮ ಬಾಳ ಬಂಧನದಲ್ಲಿ ದಾರಿ ತೋರಿಸು 

ನೀ ದಾರಿ ತೋರಿಸು ।।೩।।

********************************************************************************** 


ನಿನ್ನ ನೆನೆವಾಗ ಗಣಪ ನನ್ನ ಮನದಾಗ 

ಸುಂದರ ನಿನ್ನ ಮೂರುತಿಯನ್ನ ಕಾಣುವುದ್ಯಾವಾಗ ।।ಪ।।


ಅಗಲಿದ ನಿನ್ನ ಹುಡುಕುತ ಬಂದೆ 

ಭಕ್ತಿಯ ಕಾಣಿಕೆ ನಾ ತಂದೆ 

ನಿನ್ನನ್ನು ಕಂಡು ಸಂತಸಗೊಂಡು 

ಎನ್ನನ್ನು ಹರಿಸೋ ನೀ ತಂದೆ ।।೧।।


ಮಾಯಾಮೋಹ ಜಗದೊಳು ತುಂಬಿರೆ 

ನಿನ್ನಯ ಒಲುಮೆ ಇರಬೇಕು 

ನಿನ್ನನ್ನು ಕಂಡು ನಡೆಯುವ ಜನಕೆ 

ಸದ್ಗತಿಯನ್ನು ಕೊಡಬೇಕು ।।೨।।


ತಂದೆಯು  ನೀನು ತಾಯಿಯು ನೀನು 

ನಿನ್ನನ್ನು ಸ್ಮರಿಸುತ ನಾ ಬಂದೆ 

ನಿನ್ನನ್ನು ಕಂಡು ಸಂತಸಗೊಂಡು 

ಎನ್ನನ್ನು ಹರಿಸೋ ನೀ ತಂದೆ ।।ಪ।।

********************************************************************************** 

ಬಾರೋ ಗೆಳೆಯ ಗಣಪತಿ 

ನೀಡು ನಮಗೆ ಶುಭಮತಿ 

ಇಲಿಯು ಬರಲಿ ಆಡುತಲಿರಲಿ 

ನೀನು ಬೇಕು ಜೊತೆಯಲ್ಲಿ ।।ಪ।।


ಎಲ್ಲಿ ಕೋಮಲ ತಾವರೆ 

ಮುದ್ದು ತಂಗಿ ಲಕ್ಷ್ಮೀ ಬಾರೆ 

ಕೂಡಿ ಶಾಲೆಗೆ ಹೋಗುವಾ 

ಪ್ರೀತಿಯ ವಿದ್ಯೆ ಕಲಿಯುವಾ ।।೧।।


ಭಾರತಿ ನಮೋ ಭಗವತಿ 

ಅಕ್ಕ ಬಾರೆ ಸರಸ್ವತಿ 

ವೀಣೆ ನವಿಲು ನಮಗೆ ನೀಡು 

ನೀನು ನಗುತ ಓಡು ಓಡು ।।೨।।


ಬಾರೋ ಗೆಳೆಯ ಗಣಪತಿ 

ನೀಡು ನಮಗೆ ಶುಭಮತಿ 

ಇಲಿಯು ಬರಲಿ ಆಡುತಲಿರಲಿ 

ನೀನು ಬೇಕು ಜೊತೆಯಲ್ಲಿ ।।ಪ।।

********************************************************************************** 

ನೀ ತಂದೆ ದೇವಾ ನೀ ತಾಯಿ ದೇವಾ 

ನೇ ಎನ್ನ ಬಂಧು ಬಳಗೆಲ್ಲಾ ದೇವಾ ।।ಪ।।


ನಡೆಯಲ್ಲಿ ಸತ್ಯ ನಾ ನಡೆಯುವಂತೆ 

ನುಡಿಯಲ್ಲಿ ಸತ್ಯ ನಾ ನುಡಿಯುವಂತೆ 

ವರ ನೀಡು ತಂದೆ ಎನಗೊಂದೆ ಚಿಂತೆ 

ಪರರಿಂದ ಮರೆತು ನೀ ಶಕ್ತನಂತೆ ।।೧।।


ಜಗಕ್ಕೆಲ್ಲಾ ಅನ್ನ ಜಗಕ್ಕೆಲ್ಲಾ ನೀರು

ಜಗಕ್ಕೆಲ್ಲಾ ಸೌಖ್ಯ ಸೌಭಾಗ್ಯ ತೋರು 

ಜಗದಲ್ಲಿ ಜಗಳ ಹೆಡೆಯಾಡದಂತೆ 

ಜಗದೊಡೆಯ ಕಾಯೋ ಜಗಪಾಲನಂತೆ ।।೨।।


ನಾನಾತ್ಮ ಅರಳಿ ನಾ ಬೆರೆಯುವಂತೆ 

ನಿನ್ನಂತೆ ಪರರ ನಾ ಅರಿಯುವಂತೆ

ನಿನ್ನನ್ನು ಅನುದಿನವು ನಾ ಸ್ಮರಿಸುವಂತೆ 

ನನ್ನೊಡೆಯ ಕಾಯೋ ನೀ ಕಾಯುವಂತೆ ।।೩।।


ನೀ ತಂದೆ ದೇವಾ ನೀ ತಾಯಿ ದೇವಾ 

ನೇ ಎನ್ನ ಬಂಧು ಬಳಗೆಲ್ಲಾ ದೇವಾ ।।ಪ।।

********************************************************************************** 

: ಲಿಂಗಾಷ್ಟಕಂ

 ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ 

ನಿರ್ಮಲ ಭಾಷಿತ ಶೋಭಿತ ಲಿಂಗಂ 

ಜನ್ಮಜ ದುಃಖ ವಿನಾಶಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ 


ದೇವಮುನಿ ಪ್ರವರಾರ್ಚಿತ ಲಿಂಗಂ 

ಕಾಮದಹನ ಕರುಣಾಕರ ಲಿಂಗಂ 

ರಾವಣದರ್ಪ ವಿನಾಶಕ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ಸರ್ವಸುಗಂಧ ಸುಲೇಪಿತ ಲಿಂಗಂ 

ಬುದ್ಧಿವಿವರ್ಧನ ಕಾರಣ ಲಿಂಗಂ 

ಸಿದ್ಧಸುರಾಸುರ ವಂದಿತ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ಕನಕಮಹಾಮಣಿ ಭೂಷಿತ ಲಿಂಗಂ 

ಫಣಿಪತಿವೇಷ್ಟನ  ಶೋಭಿತ ಲಿಂಗಂ 

 ದಕ್ಷಸುಯಜ್ಞ ವಿನಾಶನ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ಕುಂಕುಮ ಚಂದನ ಲೇಪಿತ ಲಿಂಗಂ 

ಪಂಕಜ ಹಾರ ಸುಶೋಭಿತ ಲಿಂಗಂ 

ಸಂಚಿತ ಪಾಪ ವಿನಾಶಕ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ದೇವಗಣಾವತಿ ಸೇವಿತ ಲಿಂಗಂ 

ಭಾವೈರ್ಭಕ್ತಿ ಭೀರೇವಚ ಲಿಂಗಂ 

ದಿನಕರ ಕೋಟಿ ಪ್ರಭಾಕರ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ಅಷ್ಟದಳೋಪರಿ ವೇಷ್ಟಿತ ಲಿಂಗಂ 

ಸರ್ವ ಸಮುದ್ಬವ ಕಾರಣ ಲಿಂಗಂ 

ಅಷ್ಟ ದರಿದ್ರ ವಿನಾಶಕ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ


ಸುರುಗುರು ಸುರವರ ಪೂಜಿತ ಲಿಂಗಂ 

ಸುರವನ ಪುಷ್ಪ ಸದಾರ್ಚಿತ ಲಿಂಗಂ 

ಪರಮಪದಂ ಪರಮಾತ್ಮಕ ಲಿಂಗಂ 

ತತ್ಪ್ರಣಮಾಮಿ ಸದಾಶಿವ ಲಿಂಗಂ

********************************************************************************** 

 

ಶಿವಲಿಂಗ ಪೂಜೆ ಸಂಭ್ರಮವ ನೋಡು 

ಬಡಹಳ್ಳಿ ಗುರುವಿನಲ್ಲಿ ಶಿವಭಕ್ತಿಗಾಗಿ 

ಕಣ್ ಬಿಟ್ಟು ನೋಡು ಚೆನ್ನವೀರ ಶರಣರಲ್ಲಿ ।।ಪ।।


ಆಚಾರ್ ಪ್ರಭೆಯು ಪ್ರಾಚಾರ್ಯವಾಯ್ತು 

ಈ ಭೂಮಿ ತಾಯಿಯಿಂದಾ 

ಆಚಾರದಲಿ ಶಿವಲಿಂಗ ಧ್ಯಾನ

ಪಂಚಾಚಾರ್ಯರಿಂದ ।।೧।।


ಕಾಯಕ್ಕೆ ಬೇಕು ಕಾಯಕವು ಬೇಕು 

ಬಸವಣ್ಣ ತೋರ ಬಂದ 

ಕಾಯದಲಿ ಮಾಯಾ ಗಲ್ಲಗಲ್ಲಲಿಕೆ ನೋಡು 

ಮಹಾದೇವ ಪ್ರಭುಗಳಿಂದ ।।೨।।


ಶಿವಧರ್ಮದೇಳ್ಗೆ ಬಂಜರ ಬಾಳ್ಗೆ 

ಕಲಬುರ್ಗಿ ಶರಣ ಬಂದ 

ಶಿವತತ್ವ ಸಿದ್ಧಿ ಗುರು ಚರರ ಬುದ್ಧಿ 

ಹಾನಗಲಧೀಶರಿಂದ ।।೩।।


ಸಂಗೀತ ಸುಧೆಯು ಮನೆಮನೆಗೆ ಬಂತು 

ಪುಟ್ಟರಾಜ ಗವಾಯಿಗಳಿಂದ 

ಸದ್ಗತಿಯು ಬೇಗ ದೊರೆಯುವ ನೋಡು 

ಚಿಕ್ಕ ಮಣ್ಣೂರೇಶನಿಂದ ।।೪।।

**********************************************************************************

ಪಂಢರಾಪುರವೆಂಬ ದೊಡ್ಡ ಶಹರ 

ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ ।।೨ ಸಲ।।

ವಿಠೋಬನಿರುವುದು ನದಿ ತೀರಾ,

ಅಲ್ಲಿ ಪಂಡರಿ ಭಜನೆಯ ವ್ಯಾಪಾರ ।।೨ ಸಲ।।

ಜೈ ಜೈ ವಿಠಲ ಪಾಂಡುರಂಗ ನಮ್ಮ ಜಯಾಧಿ 

ವಿಠಲ ಪಾಂಡುರಂಗ ।।೨ ಸಲ।।


ಭಕ್ತಿ ಪೋಷಕ ಪಾಂಡುರಂಗ, ನಮ್ಮ 

ಮುಕ್ತಿ ಪ್ರದಾಯಕ ಪಾಂಡುರಂಗ ।।೨ ಸಲ।।

ತಂದೆ ತಾಯಿಯು ಪಾಂಡುರಂಗ, ನಮ್ಮ

ಬಂಧು-ಬಳಗವು ಪಾಂಡುರಂಗ ।।೨ ಸಲ।।


ಬನ್ನಿ ಹೋಗೋಣ ನಾವೆಲ್ಲಾ, ನಮ್ಮ 

ಪಂಡರೀನಾಥನ ದರುಶನಕೆ ।।೨ ಸಲ।।

ದಾನ ಧರ್ಮಗಳ ಮಾಡೋಣಾ, ನಮ್ಮ 

ಪಾಪ ಕರ್ಮಗಳ ತೊಳೆಯೋಣ ।।೨ ಸಲ।।

**********************************************************************************

ಆರುತಿ ಕರುಣೆ ಮೂರುತಿಗೆ 

ಬೆಳಗುವೆ ಶ್ರೀ ಜಗದಾಂಬಿಕೆಗೆ ।।ಪ।। ೨ ಸಲ ।।


ಲೋಕೈಕ ಮಾತೆಯ ಸ್ಮರಿಸುತಲಿ 

ಏಕೈಕ ವರವನು ಬೇಡುತಲಿ ।। ೨ ಸಲ।।

ಬಂದಿರೆ ಪಾಲಿಸೋ ಕುಸುಮವಂಥಾ 

ಲಾಲಿಸು ಹೆಮ್ಮೆಯ ಮರೆಯೊನಂದಾ ।।೨ ಸಲ।।


ಪುತ್ಥಳಿ ಹರಿವಂತ ದೋಣಿರುವ 

ಮರಕಂಠ ಮಣಿಯಂತೆ ಶೋಭಿಸುವ ।।೨ ಸಲ।।

ಮುತ್ತಿನ ಆರುತಿ ಬೆಳಗುವೆನು 

ಕುಂಕುಮ ಭಾಗ್ಯವ ಬೇಡುವೆನು ।।೨ ಸಲ।।

**********************************************************************************

ಗಣಪ ಗಣಪ ಬಾರೋ

ವಿದ್ಯಾ ಬುದ್ಧಿ ಕೊಡು 

ಮಕ್ಕಳ ಬಾಳಿಗೆ ಮಕ್ಕಳ ಬಾಳಿಗೆ ।।ಪ।।


ಹೂವಿಗೂ ಹಣ್ಣಿಗೂ ನೀನೆ ದೇವರು 

ನೋವಿಗೂ ನಲಿವಿಗೂ ನೀನೆ ದೇವರು ।।


ಓ ಗಣಪ ಊರೇನೇ ಅಂದರೂ ನೀ ನನ್ನ ದೇವರು 

ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರು ।।

**********************************************************************************

ಗಣಪ ಬರುವೆಯಾ ಬೆಳಕ ತರುವೆಯಾ 

ನಮ್ಮ ಬಾಳಿನಲಿ ಗಣಪನೇ ನಮ್ಮ ಬಾಳಿನಲಿ 

ನಾ ನಿನ್ನ ಸೇವೆಯನು ಮನಸಾರೆ 

ಮಾಡುವೆನು ಏಳೇಳು ಜನ್ಮದಲ್ಲಿ 

ನಾ ನಿನ್ನ ಭಕ್ತನಾಗಿರುವೆ ।।ಪ।।


ಮೂರು ಲೋಕದ ಮುಕ್ಕಣ್ಣ ನಿನ್ನ ತಂದೆ ಶಂಕರನು

ತಂದೆಯ ಕೋಪಕೆ ನೀ ಮಡಿದು 

ಮರಳಿ ಜನ್ಮವ ನೀ ಪಡೆದೆ

ಆನೆಯ ಮುಖವ ನೀನೊತ್ತು 

ಗಜಾನನಾಗಿ ನೀ ಬಂದೆ ನಮ್ಮ ಬಾಳಿನಲಿ 

ಗಣಪನೇ ನಮ್ಮ ಬಾಳಿನಲಿ ।।೧।।


ಮೂಷಕನಾದರೆ ನಾ ನಿನ್ನ ಜೊತೆಯಲಿರುವೆ 

ಅನುದಿನವು, ಭಾದ್ರಪ ಚೌತಿಯ ದಿನದಂದು 

ಭೂಮಿಗಿಳಿದು ನೀ ಬರುವೆ, ಹೋಳಿಗೆ 

ತುಪ್ಪದ ನೈವೇಧ್ಯ ನಾ ಮಾಡಿ ನಿನಗೆ ಪೂಜಿಸುವೆ 

ಬಾರೋ ಧರೆಗಿಳಿದು ಗಣಪನೆ 

ಬಾರೋ ಧರೆಗಿಳಿದು ।।೨।।  

**********************************************************************************

 ಶರಣು ಸಿದ್ಧಿ ವಿನಾಯಕ

ಶರಣು ವಿದ್ಯೆ ಪ್ರದಾಯಕ 

ಶರಣು ಪಾರ್ವತಿ ತನಯಮೂರುತಿ 

ಶರಣು ಮೂಷಿಕ ವಾಹನ ।।ಪ।।


ನಿಖಿಲ ನೇತ್ರನೇ ದೇವಸುತನೇ 

ನಾಗಭೂಷಣ ಪ್ರಿಯನೇ 

ತಟಿಲತಾಂಕಿತ  ಕೋಮಲಾಂಗನೇ 

ಕರ್ಣಕುಂಡಲಧಾರಣೆ ।।೧।।


ಭಟ್ಟ ಮುಕ್ತಿಯ ಪದಕ ಹಾರನೆ 

ಬಾಹು ಹಸ್ತ ಚತುಷ್ಟನೇ 

ಪಕ್ಷಿವಾಹನ ಶ್ರೀ ಪುರಂದರ 

ವಿಠಲ ನಾ ನಿಜ ದಾಸನೆ।।೨।।  

**********************************************************************************

ಗಣಪತಿ ಎನ್ನ ಪಾಲಿಸೋ ಗಂಭೀರ 

ಪಾರ್ವತಿ ನಂದನ ಸುಂದರ ವದನ 

ಶರಣಾದಿ ಶುರವಂದ್ಯ ಶಿರಬಾಗುವ 

ನಾ ಆದಿ ಪೂಜಿಪ ನೀನು ।।ಪ।।


ಮೋದಕ ಬೇಕಿರಲಿ ಮೊದಲಿನಲಿ 

ಸದಾಮನ ನಿಲ್ಲಿಸೋ 

ಪಂಕಜನಯನ ಶ್ರೀ ವೆಂಕಟರಮಣ

ವಿಠಲನ ಕಿಂಕರ ನೆನೆಸೆನ್ನ ಶಂಕರ 

ತನಯನ ।।೧।।

**********************************************************************************

ಶ್ರೀ ಶಾರದಾ ಮಾತಾಯಿಯೇ 

ಶೃಂಗೇರಿ ಪುರದ ವಾಸಿಯೇ 

ನಾ ನಿನ್ನ ಪಾದವ ಬೇಡುವೆ 

ತೋರಿಸು ಕೃಪೆಯ ದೇವಿಯೇ ।।ಪ।।


ಹಣೆಯಲಿ ಕುಂಕುಮ ತಲೆಯಲಿ ಕಿರೀಟ 

ಕೈಯಲ್ಲಿ ಹಿಡಿದಾ ವೀಣೆಯಾ 

ನಡುನೀರಿನಲ್ಲಿ ಕೈ ಬಿಡಬೇಡ

ಸರಿಯಾದ ದಡವ ಸೇರಿಸು ।।

**********************************************************************************

 

ಶ್ರೀ ಗಣೇಶ ಭಕ್ತಿಗೀತೆಗಳು

 : ಶ್ರೀ ಗಣೇಶ ಭಕ್ತಿಗೀತೆ:

 

ಎಂದೆಂದೂ ಗಣಪನ ಭಜಿಸಿ ಪಾವನರಾಗಿ 

ಮುಂದೆಂದೂ ಕಾಂಡ ಸುಖವ ಕಾಣುವರಾಗಿ 

ನೊಂದವರು ಬಂದಿಹೆವು ಬೀ ಸಲಹು ಎಂದು 

 

ಸಾವಿರ ಜನುಮವೇ ಬರಲಿ ಎಂದಿಗೂ ನಾನು 

ನಿನ್ನಯ ಭಕ್ತನಾಗಿ ಎಂದಿಗೂ ನಾನು 

ಓಹೋ ಓಹೋ ಓಹೋ .. 


ನಿನ್ನ ಧ್ಯಾನ ಮಾಡುವೆ 

ಭಕ್ತಿಯಿಂದ ಭಜಿಸುವೆ 

ಒಲವಿಂದ ನಿನ್ನ ನೋಡಿ ಹಾಡುವೆ 

ಕುಣಿಯುವೆ ನಲಿಯುವೆ ।।ಎಂದೆಂದೂ ।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಲಂಬೋದರ ಪ್ರಭು ಅಂಬಾಸುತ 

ಪಾಹಿಗಣನಾಥ ಧರೆಗೆ ಬಾ.. ।।ಪ।।


ದೇವಾ ನಿನ್ನ ಸನ್ನಿಧಿಗೆ 

ವರವನ್ನು ಬೇಡಲು ಬಂದಿಹೆವು 

ಅಜ್ಞಾನವ ಕಳೆದು ನೀ 

ಜ್ಞಾನವ ನೀಡು ಬಾ... ।।೧।।


ಭವ ಬಂಧನದಲಿ ಕುಳಿತಿಹೆವು 

ನಿನ್ನಯ ಚರಣಕೆ ಎರಗಿಹೆವು 

ನಮ್ಮಯ ತಪ್ಪನು ಮನ್ನಿಸಿ 

ಕಾಯು ಬಾ... ।।೨।।


ಹಕ್ಕಿಯ ಗೂಡನು ಸೇರುತಿದೆ

ನಿನ್ನಯ ಧ್ಯಾನ ಮಾಡುತಿದೆ 

ತಮಂಧದ ಬಾನಲಿ ತೇಲಿದೆ 

ಎನ್ನಮನ... ।।೩।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಮೊದಲಿಗೆ ಬಾಗ್ವೆವು ಗಣಪ 

ಮೊದಲಿಗೆ ಒಯ್ಯಬ್ಯಾಡೊ ।।ಪ ।


ಪದರಾಗ ಬಿದ್ದೆವು ನಿನಗ 

ನಡಮುರಿದು ಬೀಳದಾಂಗ 

ಸದರದಿಂದ ಕಷ್ಟವನ್ನು ಪರ 

ಹರಿಸಿ ಪಾರ ಮಾಡೋ ।।೧।।


ಬುದ್ಧಿ ಕೊಡುವ ಸ್ವಾಮಿಯು ನೀನು 

ಶುದ್ಧ ಬುದ್ಧಿ ಗೇಡಿಯು ನಾವು

ಇದ್ಧ ಬುದ್ಧಿಯಿಂದ ನಮ್ಮ

ಗೆದ್ದು ಬರುವಹಾಂಗ ಮಾಡೋ ।।೨।।


ವೇದಶಾಸ್ತ್ರ ಬಲ್ಲವರಿಲ್ಲ 

ವಾದ ಮಾಡಿ ಗೊತ್ತೆ ಇಲ್ಲ 

ನಾದಗೇಡಿ ಹುಡುಗರನ್ನು 

ಹೋದಲ್ಲೆಲ್ಲ ಕೈ ಬಿಡಬ್ಯಾಡ ।।೩।।


ಕೂಡಿದಂತ ಈ ಸಭೆಯೊಳಗ 

ಕಾಡಬೇಡ ತಂದೆ ಎನ್ನ 

ಕೂಡಿದಂತ ಮಂದಿ ಮುಂದ 

ಮಾಡಬೇಡ ಮಾನಹಾನಿ ।।೪।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಪಾರ್ವತಿ ನಂದನಾ...  ಪಾರ್ವತಿ ನಂದನಾ...

ವಿಘ್ನ ವಿನಾಶಕ ಭಕ್ತಿ ಜನ ಪೋಷಕ 

ಕರುಣೆ ತೋರಯ್ಯಾ...  ।।ಪ।।


ಚೌತಿಯ ದಿನದ ಹಬ್ಬಕೆ ಬಾರೋ ಗಣಪ 

ಗರಿಕೆ ಪತ್ರಿ ನೀಡುವೆ ನಿನಗೆ ಬೆನಕ 

ಆನೆ ಮುಖದ ಗಣಪಯ್ಯ ಇಲಿಯನ್ನೇರಿ 

ಬಾರಯ್ಯ ಭಕುತ ಬಾಂಧವನೇ ।।೧।।


ಪಾಶ ಅಂಕುಶಕರ 

ಶಿವಗಣ ನಾಯಕಸುರ

ಲಂಬೋದರನೇ ಬಾರಯ್ಯ 

ಲಕುಮಿಕರನೇ ಬಾರಯ್ಯ 

ಪ್ರಥಮ ಪೂಜಿಪನೇ ।।೨।।


ಸೊಂಡಿಲ ಗಣಪ ಸೊಂಡಿಲ ಏರಿ ಬಾರಾ

ನಿನ್ನಯ ದರುಶನ ಭಾಗ್ಯವ ನಮಗೆ ತಾರಾ 

ನೀನೆ ನಮಗೆ ದಿಕ್ಕಯ್ಯ ಮರದ ಕಿವಿಯ 

ಗಣಪಯ್ಯ ಕರಣ ಗುಣಸದನ ।।೩।।


ಪಾರ್ವತಿ ನಂದನಾ... ಪಾರ್ವತಿ ನಂದನಾ...  

ವಿಘ್ನ ವಿನಾಶಕ ಭಕ್ತಿ ಜನ ಪೋಷಕ 

ಕರುಣೆ ತೋರಯ್ಯಾ...  ।।ಪ।।


**********************************************************************************

ಶ್ರೀ ಗಣೇಶ ಭಕ್ತಿಗೀತೆ

 ಶ್ರೀ ಗಣೇಶ ಶ್ರೀ ಗಣೇಶ ಶಿವನಕುಮಾರ 

ಸುತಜನವೆನುತ ಪ್ರಭು ಪ್ರಭು ಸುತ 

ಜನವೆನುತ ಪ್ರಭು ವಿಧ್ಯಾದಾಯಕ ಬುದ್ಧಿ 

ಪ್ರದಾಯಕ ಸಿದ್ಧಿ ವಿನಾಯಕ ಸಲಹಾ ದೇವಾ 


ಮೋದಕ ಪ್ರಿಯನೇ ಸಾಧುವಂದಿಪನೇ 

ಆದಿ ಪೂಜಿಪನೆ ಆನೆಯ ಮುಗನೇ।।೧।।