Thursday, December 12, 2013

ದುನಿಯಾ (2007)


ಕರಿಯಾ ಐ ಲವ್ ಯೂ

ಚಲನಚಿತ್ರ: ದುನಿಯಾ (2007)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಮನೋಹರ್ 
ಗಾಯನ: ರಾಜೇಶ್ ಕೃಷ್ಣನ್, ನಂದಿತಾ 
ನಿರ್ದೇಶನ: ಸೂರಿ 
ನಟರು: ವಿಜಯ್, ರಶ್ಮಿ  


ಕರಿಯಾ ಐ ಲವ್ ಯೂ, ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯೂ, ಬಿಳಿಮೋಡದ ಆಣೆ
ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ....

ಓದು ಬರಹ ಬರದು ಬರಿ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನೀ ಬಾಳು ನಾವೂ ಒಂದೇ ಉಸಿರು....

ಯಾರು ಏನೇ ಅನಲಿ ಇಡೀ ಊರಿಗೂರೇ ಬರಲಿ
ಜೇವವು ನಿನ್ನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನಾ ಊರ್ ಮ್ಯಾಲೆ ಯಾಕೆ ಗಮನ
ಒಲವೇ ಜೀವನ ಸಾಕ್ಷಾತ್ಕಾರ ಜೀವ ಕೊಡ್ತಿನಿ ಚಿನ್ನ....


*******************************************************************************

ನೋಡಯ್ಯ ಕ್ವಾಟೆ ಲಿಂಗವೇ 

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಗಾಯನ: ಎಂ. ಡಿ. ಪಲ್ಲವಿ 


ಅಮ್ಮಣ್ಣಿ ಅವ್ನತ್ರ ಇರೋದ್ ಯಾವ್ದೂ  ಔನ್ದಲ್ಲ...
ಎಲ್ಲ ಅವ್ರಪ್ಪ ಕೊಡ್ಸಿರ್ತಾನೆ...
ಬೇಕಾದ್ರೆ ಹೋಗ್ ಕೇಳು...
ಔನು ಹಾಕೊಂಡಿರೋ ಚಡ್ಡಿ ಕೂಡ
ಅವ್ನಪ್ಪಾನೆ ಕೊಡ್ಸಿರೋದು.
ನಾವು ಅಂಗಲ್ಲ....ಅಡಿ ಇಂದ ಮುಡಿವರ್ಗು
ನಮ್ ಸಂಪಾದ್ನೇಲಿ ಬದುಕ್ತಾ ಇರೋರು
ಅದ್ಯಾತ್ರದ್ದೋ ನೆಕ್ತಾ ಇದ್ಯಲ್ಲ ನೆಕ್ಬುಟ್ಟು ಓಗ್ ದಬ್ಬಾಕು......


ನೋಡಯ್ಯ ಕ್ವಾಟೆ ಲಿಂಗವೇ
ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....

ಪಾಯಯಿಲ್ಲ ಗ್ವಾಡೆಯಿಲ್ಲ
ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು
ಎಲ್ಲಾನೂ ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ
ಏನೇ ಬಂದ್ರು ಜಗ್ಗಲ್ಲ ಅವಳಿಗೆ ಇವನೇ ಕೊಡೆಯಾಗವ್ನೆ
ಇವ್ರ್ ಬಿಟ್ ಇವ್ರ್ಗೆಯಾರಿಲ್ಲ

ಪೆದ್ದು ಹೈದ ಮನ್ಸು ಸುದ್ದ
ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು
ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು
ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ
ಅಂತ ಇವ್ನಾ ಜೊತೆಗವ್ಳೆ...


*******************************************************************************

ಈ ಪಾಪಿ ದುನಿಯ ಪ್ರೀತಿ ಕಲಿಸಿ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಬದ್ರಿಪ್ರಸಾದ್ 

ಈ ಪಾಪಿ ದುನಿಯ ಪ್ರೀತಿ ಕಲಿಸಿ
ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನುನೂ ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ
ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮುಂಜಾನೆವರೆಗೂ ಸೋನೆ ಸುರಿದ
ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯ
ನೀನುನೂ ಹಾಗಿನ
ಓ ಗೆಳತಿ ನಿನ್ನಲ್ಲು ವಿಷವೇನ


********************************************************************************


ಸಾಲ ಮಾಡಿಯಾದ್ರು

ಸಾಹಿತ್ಯ: ವಿ. ಮನೋಹರ್ 
ಗಾಯಕರು: ಅಭಿಮನ್ಯು ಭೂಪತಿ, ಮೈಸೂರು ಜೆನ್ನಿ, ಗುರುರಾಜ್ ಹೊಸಕೋಟೆ 

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ //೨ ಸಲ//

ಲಕ್ಷ ರೂಪಾಯಿ ಇದ್ದೋರಿಗೆ ಕೋಟಿಯಾ ಚಿ೦ತೆ ಗುರೂ
ಕೋಟಿ ಕೋಟಿ ಕೂಡಿಟ್ಟರೆ ಮೈತು೦ಬಾ ಕಾಯ್ಲೇ ಶುರು
ಚಿ೦ತೆಗಳೇ ಇಲ್ದೋರಿಗೆ ಸ೦ತೇಲೂ ನಿದ್ದೆ ಗುರೂ
ಒ೦ದೇ ಹೊತ್ತು ನಾವು೦ಡರೂ ತ೦ಪಾಗಿರೋ ಗಾ೦ಪರೂ
ಮೃಷ್ಟಾನ್ನವು ಸೈ ಚಿತ್ರಾನ್ನವು ಸೈ ಸಿಕ್ಕಾಗ ಹೊಡಿ ಲೊಟ್ಟೇ
ಫುಟ್‌ಪಾತಲೂ ಸೈ ಚೌಪಾಟಿಲೂ ಸೈ ಮೈ ಚಾಚಿ ಹೊಡಿ ನಿದ್ದೇ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಕಡಲಾ ಕಡೆ ಎದ್ದು ಬಿದ್ದು ಓಡ್ತಾವೆ ಎಲ್ಲಾ ನದಿ
ತಿಮ್ಮಪ್ಪನ ಹು೦ಡಿ ಒಳ್ಗೆ ಸೇರ್ತಾೆವೆ ಎಲ್ರಾ ನಿಧೀ
ಇದ್ಹಾ೦ಗೆನೆ ಇರೋರು ನಾವ್ ಸುಮ್ನೆ ಬಿಡಲ್ಲಾ ವಿಧೀ
ನಮ್ಮ್ ತ೦ಟೆಗೆ ಬ೦ದ್ರೆ ಅದು ಎದ್ದೆದ್ದು ಝಾಡ್ಸಿ ಒದೀ
ಸನ್ಯಾಸಿಗೂ ಜೈ ಬೇವರ್ಸಿಗೂ ಜೈ ಇಬ್ರಿ೦ದ್ಲೂ ಕಲಿ ಪಾಠ
ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ ನಮ್ಮ್ ದ್ಯಾವ್ರೇ ಈ ಊಟ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

********************************************************************************

ಮುಂಗಾರು ಮಳೆ (2006)



ಅನಿಸುತಿದೆ ಯಾಕೋ ಇಂದು


ಚಲನಚಿತ್ರ : ಮುಂಗಾರು ಮಳೆ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ಸಂಗೀತ : ಮನೋ ಮೂರ್ತಿ 
ಗಾಯಕರು : ಸೋನು ನಿಗಮ್ 
ನಿರ್ದೇಶಕರು : ಯೋಗರಾಜ್ ಭಟ್ 
ನಟಿಸಿದವರು : ಗಣೇಶ್, ಪೂಜಾ ಗಾಂಧಿ



ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗಿ ಬಂದವಳೆಂದು
ಆಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೆ

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನಯ ಹೆಸರಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ....


******************************************************************************

ಅರಳುತಿರು ಜೀವದ ಗೆಳೆಯ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು : ಶ್ರೇಯಾ ಘೋಷಾಲ್ 

ಅರಳುತಿರು ಜೀವದ ಗೆಳೆಯ, ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ, ಪ್ರೇಮದ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನವೇನೆ, ಹೀಗೆ ಸುಮ್ಮನೆ...

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು, ಯಾಕೆ ಸುಮ್ಮನೆ...


ಮಾತಿಗೆ ಮೀರಿದ ಭಾವದ ಸೆಳೆತವೆ ಸುಂದರ
ನಲ್ಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರೂ ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೆ
ಇರಲಿ ಗೆಳೆಯ ಈ ಅನುಬಂಧ, ಹೀಗೆ ಸುಮ್ಮನೆ...



********************************************************************************

ಇವನು ಗೆಳೆಯನಲ್ಲ

ಸಾಹಿತ್ಯ: ಹೃದಯಶಿವ 
ಗಾಯನ: ಶ್ರೇಯಾ ಘೋಷಾಲ್ 



ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ

ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ     
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ

ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ


********************************************************************************


ಕುಣಿದು ಕುಣಿದು ಬಾರೆ

ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು : ಉದಿತ್ ನಾರಾಯಣ್, ಸುನಿಧಿ ಚೌಹಾಣ್, ಸ್ಟೀಫನ್ 


ಸಂಗಡಿಗರು : ಜೂಬಾರೆ ಜೂಬಾರೆ ಜೂಬ ಜೂಬ
ಜೂಬಾರೆ ಜೂಬಾರೆ ಜೂಬ ಜೂಬ

ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಕುಣಿವಾ ನಿನ್ನ ಮೇಲೆ ಮಳೆಯ ಹನಿಯಾ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ

ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ

ಹೆಣ್ಣು : ಇರುಳಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ

ಗಂಡು : ಕಣ್ಣಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ
ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ

ಹೆಣ್ಣು : ನಿನ್ನಾ ಕಣ್ಣಾ ತುಂಬಾ ಇರಲಿ ನನ್ನಾ ಬಿಂಬ
ಹೂವಿಗೆ ಬಣ್ಣ ತಂದವನೇ ಪರಿಮಳದಲ್ಲಿ ಅರಳುವ ಬಾರೋ
ಓಲವೇ ವಿಸ್ಮಯ

ಸಂಗಡಿಗರು : ಡೂಬಾರೆ ಡೂಬಾರೆ ಡೂಬ ಡೂಬ
ಜೂಬಾರೆ ಜೂಬಾರೆ ಜೂಬ ಜೂಬ

ಗಂಡು : ಓಲವೇ ನೀ ನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ

ಹೆಣ್ಣು : ಖುಷಿಯಿಂದ ಈ ಮನವೆಲ್ಲ ಹೂವಾಗಿರೆ
ಬೇರೇನು ಬೇಕಿಲ್ಲ ನೀನಲ್ಲದೆ

ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ

ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ



********************************************************************************

ಮುಂಗಾರು ಮಳೆಯೇ

ಸಾಹಿತ್ಯ: ಯೋಗರಾಜ್ ಭಟ್ 
ಹಾಡಿದವರು : ಸೋನು ನಿಗಮ್ 


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ....

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ  ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ....

ಒಲವ ಚಂದಮಾಮ ನಗುತ ಬಂಡ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ...


********************************************************************************

ಒಂದೇ ಒಂದು ಸಾರಿ

ಸಾಹಿತ್ಯ : ಕವಿರಾಜ್
ಗಾಯಕರು : ಕುನಾಲ್ ಗಾಂಜಾವಾಲ, ಪ್ರಿಯಾ ಹೇಮೇಶ್ 


ಹೆಣ್ಣು : ಯಾ..ಹೇ..
ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ..
ಹೆಣ್ಣು : ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಗಂಡು : ಒಂದೇ ಕ್ಷಣ ಎದುರಿದ್ದು
ಹೆಣ್ಣು : ನನ ನಾನನ ನಾನ ನಾನನ ಆ.ಆ
ಗಂಡು : ಒಂದೇ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈ ಮನಸನು ನೀ ಅವರಿಸಿದೆ
ಹೆಣ್ಣು : ಲಾಲ ಲಾಲ ಲಲಾಲ ಲಾಲಲಾ.
ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಹೆಣ್ಣು : ನಾನಾನ ನಾನನ ಹೇ.ಹೇ.ಹೇ
ನಾನ ನಾನ ನಾನ ನಾನಾನ ಹೇ.ಹೇ.ಹೇ
ನಾನಾನ ನಾನನ ಹೇ.ಹೇ.ಹೇ
ನಾನಾನ ನಾನನ ಹೇ.ಹೇ.ಹೇ
ನಾನಾನ ನಾನ ನಾನ ನಾನ ನಾನ.
ಗಂಡು : ನಿನ್ನಾ ನಗು ನೋಡಿದಾಗ
ಹೆಣ್ಣು : ನನ ನಾನನ ನಾನ ನಾನನ ಆ.ಆ
ಗಂಡು : ನಿನ್ನಾ ನಗು ನೋಡಿದಾಗ
ಹಗಲಲ್ಲೂ ಸಹ ಬಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು
ಹೆಣ್ಣು : ಲಾಲ ಲಾಲ ಲಲಾಲ ಲಾಲಲಾ

ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ..ಹೆ.ಹೇ..


*********************************************************************************


ಸುವ್ವಿ ಸುವ್ವಾಲಿ

ಸಾಹಿತ್ಯ : ಹೃದಯಶಿವ
ಗಾಯಕರು : ಹೇಮಂತ್ ಕುಮಾರ್ ಮತ್ತು ಸಂಗಡಿಗರು 


ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಅಹಾ.ಓಹೋ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು : ಶಾಬ..ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಅಹಾ.ಓಹೋ
ಗಂಡು : ಚಿನ್ನಾ ಅಪರಂಜಿಗಿಂತ ಚೆನ್ನ
ನಿನಾ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು
ಜೊತೆಗಿರುವನು
ಯಾರು ಕೊಡದಷ್ಟು ಓಲವಾ ತಂದು
ತಗೋ ಎನುವನು
ಒಂದು ಗಳಿಗೇನು ನಿನ್ನಾ ಬಿಟ್ಟು
ಇರನೂ ಇರನೂ
ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು :
ಏಯ್.ಅಹ.ಅಹಾ.ಶಾಬ
ಓಹೋ.ಅಹ.ಏಯ್
ಅಹ.ಅಹಾ.ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಒ ಬಲ್ಲೆ
ಒ ಬಲ್ಲೆ ಒ ಬಲ್ಲೆ ಒ ಬಲ್ಲೆ ಒ ಬಲ್ಲೆ
ಗಂಡು : ಅವನ ಮನಸೊಂದು
ಒಲವ ತೂಗೋ
ಜೋಕಾಲಿಯೋ
ಅಲ್ಲಿ ಹಾಡುವಂತ ಜೋಗುಳ ಗಾನ
ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ
ಆ ಲಾಲಿಯ ಕೇಳೋ ಭಾಗ್ಯ ಬರೆದು
ಬಾಗಿಲ ತಟ್ಟಿ ಕರೆದಿದೆ ನಿನ್ನಾ
ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತಿಕೊಂಡು ಕುಣಿದಾಡುವನು
ಸಂಗಡಿಗರು : ಶಾಬ ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಹೋಯ್..

********************************************************************************

ಮಳೆಯಲಿ ಜೊತೆಯಲಿ (2009)

                                                           



ಚಲನ ಚಿತ್ರ : ಮಳೆಯಲಿ ಜೊತೆಯಲಿ (2009)
ನಟರು : ಗಣೇಶ್, ಯುವಿಕಾ ಚೌಧರಿ, ಅಂಜನ ಸುಖಾನಿ
ಗಾಯನ : ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ 
ನಿರ್ದೇಶಕರು : ಪ್ರೀತಂ ಗುಬ್ಬಿ
ಸಂಗೀತ : ವಿ. ಹರಿಕೃಷ್ಣ 





ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು


ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ.......


ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
ದಾರಿಯಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ.......


********************************************************************************



ಮಳೆಯಲಿ ಜೊತೆಯಲಿ

ಸಾಹಿತ್ಯ: 
ಗಾಯನ: ಸೋನು ನಿಗಮ್

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು | ಮಳೆಯಲಿ |
ನನಗೆ ಕುತೂಹಲ.. ಹೋ ಓ ಓ ತುಂಬಾ ಕುತೂಹಲ || 

ಹನೀ ಹನಿಯ ಸವಿ ದುನಿಯಾ ನ ವಿವರಿಸಿ ಹೇಳಲಾ || ಮಳೆಯಲಿ || 

ಅದೇ ಅದೆ ಮೊಡವೀಗ ವಿನೂತನ ರೂಪ ತಾಳಿ ನಿನ್ನಾ ಸೋಕಿದೆನು
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನಾ ಕುಡಿಯನು ಮನಸಲೇ ಬಿಡಿಸಲು ತುಂಬಾ ಕುತೂಹಲ || ಮಳೆಯಲಿ || 

ಇದೇನಿದು ಮೂಕಬಾವ ತಯಾರಿಯೇ ಇಲ್ಲದೇನೆ ನನ್ನಾ ಕಾದಿದೆ
ನಿವೇದನೆ ಆದಮೇಲು ಸತಾಯಿಸ ಬೇಕು ನೀನು ನನ್ನ ನೋಡದೇನೆ
ಸಿದಿಲಿನಾ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ || ಮಳೆಯಲಿ ||


*******************************************************************************

ಪರಿಚಯ (2009)


ಕುಡಿ ನೋಟವೇ

ಚಲನ ಚಿತ್ರ : ಪರಿಚಯ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಜೆಸ್ಸಿ ಗಿಫ್ಟ್ 
ಗಾಯಕರು : ಶ್ರೇಯಾ ಘೋಷಾಲ್, ಶಾನ್
ನಿರ್ದೇಶನ: ಕೆ. ಸಂಜಯ್ 
ನಟರು : ತರುಣ್ ಚಂದ್ರ, ರೇಖಾ, ಸಿಂಧು (HP)


ಕುಡಿ ನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....

ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ

ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ ಆ ಆ...

ಕುಡಿನೋಟವೇ.......

*********************************************************************************

ನಡೆದಾಡುವ ಕಾಮನಬಿಲ್ಲು

ಸಾಹಿತ್ಯ : ಕವಿರಾಜ್  
ಗಾಯಕರು : ಕೇಕೆ, ರಾಜಲಕ್ಷ್ಮಿ 


ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆಗಿವಳು,
ಏನೆಂದರು ಸುಂದರ ಸುಳ್ಳು..!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!! 
ನಡೆದಾಡುವಾ ಕಾಮನ ಬಿಲ್ಲು..... 


ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ಬೆಳ್ಳಿಮೋಡ ಇವಳ ಮನಸ್ಸು ಮನಸ್ಸು,
ಮಿಂಚುಬಳ್ಳಿ ಅಂದದ ಮುನಿಸೂ..
ಸ್ವರ್ಗದಲ್ಲೂ ಇರದ ಸೊಗಸು ಸೊಗಸು..
ಮಾರುತ್ತಾಳೆ ಮಾಯದ ಕನಸು..
ಪದೇ ಪದೇ ಪದೇ ಪದೇ ಅರೆರೆ..,
ಮರುಳಾದೆ ನೋಡಿ, ಇವಳೆಂತಾ ಮೋಡಿ..!!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು.., 

ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ಹೆಜ್ಜೆಹಾಕು ಇವಳ ಲಯಕೆ ಲಯಕ್ಕೆ,
ಭೂಮಿಗುನು ಪುಳಕದ ಜಳಕ,
ಬಾನಿನಿಂದ ಕೆಳಗೆ ಇಣುಕಿ ಇಣುಕಿ,
ದೇವರಿಗೂ ನೋಡುವ ತವಕ..
ಸವಿ ಸವಿ ಸವಿ ಸವಿ ಅಹ್ಹಾ..
ಈ ಹುಡುಗಿ ಜೇನು, ಶರಣಾದೆ ನಾನು..!!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!!
ನಡೆದಾಡುವಾ ಕಾಮನ ಬಿಲ್ಲು...,

********************************************************************************

ಅಂಬಾರಿ - ಆಕಾಶ ನೀನೆ ನೀಡೊಂದು ಗೂಡು

ಚಿತ್ರ : ಅಂಬಾರಿ 
ನಟರು : ಯೋಗೀಶ್, ಸುಪ್ರೀತಾ 
ಗಾಯಕರು : ಸೋನು ನಿಗಮ್ 

ಆಕಾಶ ನೀನೆ ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು
ಕಂಡಿತು ಕಾಲು ದಾರಿ
ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂ ಹಂದರ
ಭಾವವೊಂದೇ ಆಗಿರೆ ಬೇಕೇ ಬೇಕು ಭಾಷಾಂತರ
ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ




ಬಿರುಗಾಳಿ (2009)

ಹೂವಿನ ಬಾಣದಂತೆ ಯಾರಿಗೂ

ಚಲನಚಿತ್ರ : ಬಿರುಗಾಳಿ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 

ಗಾಯಕರು : ಶ್ರೇಯಾ ಘೋಷಾಲ್  
ಸಂಗೀತ: ಅರ್ಜುನ್ ಜನ್ಯ 
ನಟರು : ಚೇತನ್, ಸಿತಾರ, ತಾರಾ



ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಚೇತನವಾದೆ ನೀನು.....

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ  ಮೇಲೆ ಬಾಕಿ ಮಾತೇನು ಆ ....

ಸಾಲದು ಇಡೀ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ.... ಓ
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ... ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ.....

ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ.... ಓ
ಸ್ಪಪ್ನವ ತಂದ ನೌಕೆ ನೀನು
ಸುಪ್ತವಾದಂತೆ ತೀರ ನಾನು
ಅನಾಮಿಕ... ಅನಾಮಿಕ....
ಈ ಯಾಣಕ್ಕೀಗ ನೀನೆ ನಾವಿಕ....


*********************************************************************************

ಮಧುರ ಪಿಸುಮಾತಿಗೆ 


ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಮೋಹಿತ್ ಚೌಹಾಣ್, ಶಮಿತಾ ಮಲ್ನಾಡ್ 



ಮಧುರ ಪಿಸುಮಾತಿಗೆ
ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ


ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ ಏನಿದು ಕಾತರ
ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....


ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ.....


********************************************************************************


ಇಂತಿ ನಿನ್ನ ಪ್ರೀತಿಯ (2008)

ಒಂದೊಂದೇ ಬಚ್ಚಿಟ್ಟ ಮಾತು

ಚಲನಚಿತ್ರ: ಇಂತಿ ನಿನ್ನ ಪ್ರೀತಿಯ
ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ರಾಜೇಶ್ ಕೃಷ್ಣನ್, ರಕ್ಷಾ ಅರವಿಂದ್ 
ಸಂಗೀತ: ಸಾಧು ಕೋಕಿಲ 
ನಟರು: ಶ್ರೀನಗರ ಕಿಟ್ಟಿ, ಸೋನು, ಭಾವನ

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ ......


ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು
ಕೆನ್ನೆ ನಿಂದ ಮುತ್ತು ನಂದ?
ಬಗೆ ಹರಿಯದ ಒಗಟು ಇದು....

ಹೋ...ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ ಹೇಳುವೆಯ?

ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು?
ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು

ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು ಹೇಳುವೆಯ?



***************************************************************************************

ಮಧುವನ ಕರೆದರೆ 


ಗಾಯಕರು : ವಾಣಿ ಹರಿಕೃಷ್ಣ 
ಸಾಹಿತ್ಯ: ಜಯಂತ್ ಕಾಯ್ಕಿಣಿ 


ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ ...

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ ಸೆರೆ ಆಗು ಆದರೆ

ಮಧುವನ ...

ಕಂಗಳಲಿ  ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ.......

ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ

ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ

ನಿನ್ನೊಲವು ನಿಜವೆ ಆದರೆ.....