ಆ ಕರ್ಣನಂತೆ
ಚಲನಚಿತ್ರ: ಕರ್ಣ (1986)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗಾ ರಾವ್
ಗಾಯನ: ಕೆ. ಜೆ. ಯೇಸುದಾಸ್
ನಿರ್ದೇಶನ: ಹೆಚ್. ಆರ್. ಭಾರ್ಗವ
ನಟನೆ: ವಿಷ್ಣುವರ್ಧನ್, ಸುಮಲತಾ, ಕೆ. ಎಸ್. ಅಶ್ವಥ್
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಆ ಕರ್ಣನಂತೆ............
ಕಸದಂತೆ ಕಂಡರೂ , ಮನೆಯಲ್ಲಿ ಎಲ್ಲರೂ,
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
ಕಸದಂತೆ ಕಂಡರೂ , ಮನೆಯಲ್ಲಿ ಎಲ್ಲರೂ,
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
ನಿನ್ನಂತ ರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
ನಿನ್ನಂತ ರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಆ ಕರ್ಣನಂತೆ............
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು.
ತನ್ನಾಸೆಯಂತೆಯೇ ಆಡೋದು ದೇವರು.
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ ನಿನ್ನನ್ನು ಮರೆಯರು.
ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ ನಿನ್ನನ್ನು ಮರೆಯರು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಆ ಕರ್ಣನಂತೆ............
********************************************************************************
No comments:
Post a Comment