Sunday, March 31, 2019

ಕೋಟಿಗೊಬ್ಬ (2001)


ಅಣ್ಣಯ್ಯ ತಮ್ಮಯ್ಯ

ಚಲನ ಚಿತ್ರ: ಕೋಟಿಗೊಬ್ಬ (2001)
ನಿರ್ದೇಶನ: ನಾಗಣ್ಣ 
ಸಂಗೀತ : ದೇವಾ 
ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ವಿಷ್ಣುವರ್ಧನ್, ಪ್ರಿಯಾಂಕಾ, ಅಭಿಜಿತ್ 


ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಅಹ್.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಜಗಕೆ ಶಿವನು ಒಬ್ಬ ...  ಇವನು ಕೋಟಿಗೊಬ್ಬ 
ಜಗಕೆ ಶಿವನು ಒಬ್ಬ ...  ನಿಮ್ಮಲ್ಲಿ ನಾನು ಒಬ್ಬ 
ಉಪ್ಪು ತಿಂದ ಮನೆಗೆ ನನ್ನ ವಂದನೆ, 
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ .. ಆಆಆ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಈ ಕಂಗಳು ಕಾಪಾಡೋ ರೆಪ್ಪೆಗಳು ನೀನೆ 
ಈ ತೋಳಗಳಿಗೆ ಬಾಳ ಕೊಡುವ ರೆಕ್ಕೆಗಳು ನೀನೆ... 
ನನ್ನೆದೆಯಾ ಗುಂಡಿಗೆಯ ಗಟ್ಟಿತನ ನೀನೇ 
ನಾನಾಡೋ ನುಡಿಗಳಲ್ಲಿ ದಿಟ್ಟತನ ನೀನೆ... 
ಒಹ್..ಒಹ್...   ಒಹ್..ಒಹ್... ಒಹ್..ಒಹ್... ಆಅಅ 
ಉಸಿರಾಡುವ ನನ್ನುಸಿರ ಏರಿಳಿತ ನೀನೆ 
ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ...ಆಆಆ 
ನೆನೆಯೋ ಪ್ರತಿ ಗುರಿಯನು ನಡೆಸೋನು ನೀನೆ.. 
ಈ ಜೀವದ ಜೊತೆ ಪ್ರತಿ ಹೆಜ್ಜೆ ನಡಿಯೋನು ನೀ.... ನೆ  
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ನೆನ್ನೆ ದುಡಿದರೆ ನಾಳೆ ನಿನ್ನದು, ನಿನ್ನೆ ಮರೆತರೆ ನೇರಳೆ ಸಿಕ್ಕದು
ನನಗೂ ನಿನಗೂ ಅರಿಯೋ ರಕ್ತ ಒಂದೇ ಕಣಯ್ಯಾ
ಇಲ್ಲಿ ನನಗೆ ನೀನೆ ನಿನಗೆ ನಾನೇ ಪ್ರಾಣಾ ಕಾಯೋ ಗೆಳೆಯಾ..ಅಹ್..
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ತಾರತ ತತ್ತರ ತರತ್ತ ತತ್ತರ ತಾರತರತರ ತಾರತ ತತ್ತರ ತರತ್ತ ತತ್ತರ 
 ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕಲ್ಲಿ
ಹೆತ್ತೊಳ ಕಾಲದಡಿಯೇ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟೂ
ಒಹ್...ಒಹ್... ಒಹ್..ಒಹ್..ಒಹ್..
ಈ ಮುಖವಾಡ ಕಳಚಿಟ್ಟು ಬದುಕೋದೇ ಧರ್ಮ
ಅಧಿಕಾರ ಧನ ಧಾಹವ ಮರಿಯೋದೆ ಧರ್ಮ
ಹಣವಿದ್ದರೇ ನೀ ಕೊಂಚ ಹಂಚೋದೆ ಧರ್ಮಾ
ನೀ ಮಗನಾದರೇ ನಿನ್ನ ತಾಯಿಯ ಕಾಯೋದೇ ಧರ್ಮಾ
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ತನಗೆಂದು ಬದುಕೋನು ತವರಿಗೆ ಹತ್ತಿರ ಆಆಆ... 
ಪರರಿಗೆ ಬದುಕೋನು ದೇವರಿಗತ್ತೀರಾ.. 
ನನ್ನ ಬದುಕಿಗೆಂದು ಬಂದು ನೀನೆ ಕಣಯ್ಯಾ 

ಎಂದು ನನ್ನ ಜೀವ ಕಾಯ ದೈವ ನೀನೆ ನೀನೆ ಒಡೆಯಾ ಅಹ್... 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಜಗಕೆ ಶಿವನು ಒಬ್ಬ ...  ನಿಮ್ಮಲ್ಲಿ ನಾನು ಒಬ್ಬ 
ಉಪ್ಪು ತಿಂದ ಮನೆಗೆ ನನ್ನ ವಂದನೆ, 
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ .. ಆಆಆ 
ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನೂ 
ಅತ್ತು ನೊಂದವರಿಗೆ ಕೈಯ ನೀಡೋ ಗೆಳೆಯನು...ಉಉಉಉ   
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ

*********************************************************************************

ಕಾವೇರಿಗೆ ಕಾಲುಂಗುರ 

ಸಾಹಿತ್ಯ : ಕೆ.ಕಲ್ಯಾಣ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 


ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ 
ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ 
ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ ||ಪ|

ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೆ 
ಚಿನ್ನಾ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂರಲೆ 
ನೀನು ನಿಂತಾಗ ಬೇಲೂರಿನಾ ಬೊಂಬೆಯು 
ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯು 
ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ 
ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ 
ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನನ್ನವಳನಾಗಿ 
ಪ್ರತಿ ಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ ||೨||

ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ

ನಿನ್ನ ಆಸೆ ಅನ್ನೋ ರಂಗನಾತಿಟ್ಟು ಹಕ್ಕಿನಾ... 
ನಿನ್ನ ಅಂದ ಅನ್ನೋ ನಾಗರ ಹೊಳೆಯಲಿ ಕವಿತೆ ನಾ 
ನಿನ್ನ ಸ್ಪರ್ಶಾನೇ ಸಹ್ಯಾದ್ರಿ ತಂಗಾಳಿಯೊ 
ನಿನ್ನ ನಗುವೆಲ್ಲಾ ನರ್ತಿಸುವಾ ಕಾರಂಜಿಯೋ 
ನಿನ್ನ ಹೃದಯಾನೆ ಪ್ರತಿಧ್ವನಿಯೊ ಆ ಗುಮ್ಮಟ 
ನಿನ್ನ ಮನಸೊಂದು ಕರುನಾಡಿನ ಭೂಪಟ 
ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ 
ಪ್ರತಿ ಜನ್ಮ ಆಸರೆಗಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ

ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 

*********************************************************************************

ಸಾಹಸಸಿಂಹ 

ಸಾಹಿತ್ಯ : ಕೆ. ಕಲ್ಯಾಣ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಸಾಹಸ ಸಿಂಹ ಸಾಹಸ ಸಿಂಹ
ಸಾಹಸ ಸಿಂಹ ಸಾಹಸ ಸಿಂಹ 
ಹೇ.. ಸಾಹಸ ಸಿಂಹ ಸಾಹಸ ಸಿಂಹ

ಮೆಟ್ಟಿ ಬರುವ ಜೋರು ನೋಡು
ದಿಟ್ಟ ವೀರ ಪಡೆಯ ನೋಡು 
ದಂಡು ದಾಳಿಯ ನಡುವೆ ಕೂಡಾ
ಗಂಡು ಗಂಡುಗಲಿಯ ಬೀರುಸು ನೋಡು 
ದಂಗೆ  ಎದ್ದು ದಂಗು ಬಡಿಸೋ
ಬೆಂಕಿ ಚೆಂಡಿನಾಟ ನೋಡು 
ರಕ್ತದಲ್ಲಿ ಬೆವರು ಸುರಿಸಿ ಕೋಟೆ
ಕಟ್ಟೋ ದೊರೆಯ ನೋಡಯ್ಯಾ...ಆಹ್
ಇವನಿದ್ದ ಕಡೆಯಲೆಲ್ಲಾ ಘೋರ ಸಿಂಹ ಘರ್ಜನೆ
ಅದು ಯಾರು ಬಂದರು ಕೊನೆ ಯಾಗದ ಸಿಂಹ ಘರ್ಜನೆ

ಹೇ.. ಸಾಹಸ ಸಿಂಹ ಸಾಹಸ ಸಿಂಹ

ಜಯದ ದಳಪತಿಯ ನೋಡು
ಮುಂಬೈ ಅಧಿಪತಿಯ ನೋಡು ಗುಡ್ಡದಷ್ಟು
ದುಡ್ಡು ನೋಡು ಲೆಕ್ಕ ಸಿಗದ ಹಡಗು ನೋಡು
ಮುಗಿಲ ಮುಟ್ಟೋ ಕಟ್ಟಡವೆಲ್ಲಾ
ಮುಳುಗಿ ಬೀಳುವ ಪರಿಯ ನೋಡು
ಗರಿಗರಿಯ ನೋಟಿನೊಳಗೂ ಸಿಂಹದ ಗುರುತು
ಇವನೇ ನೋಡಯ್ಯಾ ಇವನೆದೆಯಾ
ರೋಮ ರೋಮವೆಲ್ಲಾ ಸಿಡಿಲ ಕಿಡಿಗಳು
ಇವನ ಎಲ್ಲ ಗುರಿಯು ಈಡೇರಿಸಲು
ಎರಡೇ ಕ್ಷಣಗಳು ಓಓಓಓಓಓಓ ...
ನಂಜುಂಡನಿವನು ಪಾಡು ನೋಡು
ನಂಜು ಕುಡಿದು ನಗುವ ನೋಡು
ಎಳೆಯ ಮಗುವ ಮನಸು ನೋಡು
ಉಕ್ಕಿ ಸುರಿವ ರಕ್ತದಲ್ಲೂ ಉಕ್ಕಿ
ಹರಿವ ಒಲುಮೆ ನೋಡು
ಚಿಂದಿ ಚಿಂದಿ ಹರಿದರನೂ ಗಾಂಧಿ
ಎಂಥ ಸಹನೆ ನೋಡು
ತನ್ನವರಿಗೆ ತನ್ನ ತನವ ಕೊಂದು
ಕೊಂಡ ಧೈವ ನೋಡಯಾ
ಈ ಕತ್ತಿ ಮೇಲೆ ನಡೆವ ಬದುಕ ತಂದವನ ಯಾರಯ್ಯಾ
ಇವನ ನೆತ್ತಿ ಮೇಲೆ ಬರೆದ ಬರಹ
ಅಳಿಸೋದು ಯಾರಯ್ಯಾ ... ಆಆಆಅ...

ಹೇ.. ಸಾಹಸ ಸಿಂಹ ಸಾಹಸ ಸಿಂಹ
ಸಾಹಸ ಸಿಂಹ ಸಾಹಸ ಸಿಂಹ

ಸ್ನೇಹ ಜೀವಿ ಸ್ನೇಹ ಜೀವಿ
ಸ್ನೇಹ ಸ್ನೇಹಕೆಂದು ಸೋಲುತ್ತಾನೆ
ಸ್ನೇಹದಿಂದ ಗೆಲ್ಲುತ್ತಾನೆ ಪ್ರೀತಿಗೆ ನೀರ
ಆಗುತ್ತಾನೆ ಪ್ರೀತಿಗೆ ತಲೆ ಬಗ್ಗುತ್ತಾನೆ
ಕೊಟ್ಟ ಮಾತು ಉಳಿಸಲೆಂದು
ಪೆಟ್ಟು ತಿಂದು ಬದುಕುತ್ತಾನೆ
ನೀನೆ ಜೀವ ಎಂದರೆ ಸಾಕು
ಜೀವ ಕೊಟ್ಟು ಕಾಯುತ್ತಾನಯ್ಯಾ
ಇವನ ಮೇಲ ನೋಟದಲಿ ಕಾಣೋ ಸಿಂಹ ಘರ್ಜನೆ
ಆಹ್ಹ್ ... ಕಾಮಧೇನು ಕರೆಯ ಹಾಗೆ
ಸ್ನೇಹ ಪ್ರಾರ್ಥನೆ ಹಾಆಹಾಆ ಓಹ್ಹ್ 

*********************************************************************************

ವರ್ಧನ ವಿಷ್ಣುವರ್ಧನ 

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 


ವರ್ಧನ ವಿಷ್ಣುವರ್ಧನಾ
ಯಜಮಾನ ನಂಗೆ ವಿಷ್ಣುವರ್ಧನಾ
ವರ್ಧನ ವಿಷ್ಣುವರ್ಧನಾ...
ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
ಕಣ್ಣಲೇ ಹುಡುಗಿ ಎದೆಗೆ
ಬುಗುರಿ ಬಿಟ್ಟ ಈ ಕರ್ಣ
ಮುಟ್ಟದೇ ನನ್ನ ಒಳಗೆ
ಇಳಿದು ಬಿಟ್ಟ ಈ ಮದನ
ನಡೆಯುವ ಭಂಗಿ ನೋಡಿ
ಪುಂಗಿ ಕಂಡ ಹಾವದೇನ
ಭಾರತೀ.. ವಾ ವಾ ವಾ ವಾ ವ
ಭಾರತಿ ಮುದ್ದು ಭಾರತಿ
ಯಜಮಾನಂತಿ ನಂಗೆ ನೀನೇ ಭಾರತಿ

ನಕ್ಕುನಕ್ಕು ನಾದಿನಿಯ ನಡು
ಉಳುಕಿತು ಗುಡು ಗುಡುಗಿತು
ಏನೇ ಅದರ ಗುಟ್ಟು ತಿಳಿಸೇ
ಮನಸು ಕೊಟ್ಟು.. ಆಹಾ ಆಹಾ ಆಹಾ 
ಓ.. ಬಿಡು ಬಿಡು ಬಿಡುವಿಲ್ಲನಂಗೆ ಬೇಕಿಲ್ಲನಂಗೆ 
ಆದರೂ ನಿಂಗೆ ಹೇಳ್ತಿನೊಂದು ಗುಟ್ಟು ಮೊದಲು ಬಾಜಿ ಕಟ್ಟು 
ಪ್ರೀತಿಗೆ ಯಾಕೆ ಬೇಕು ಬಾಜಿ..
ಆಹಾ ರಾಜಿನಾ ಮಾಡ್ಕೊಳಾಣ ರಾಜೀ..
ಓ… ತುಂಟಾಟ ಇದ್ದರೆ ತಾನೆ ಯೌವನ

ವರ್ಧನ ವಿಷ್ಣುವರ್ಧನಾ.. (ಒಯ್ ಒಯ್..
ಯಜಮಾನ ನಂಗೆ ವಿಷ್ಣುವರ್ಧನಾ.ಆ ಆ.. ಥ್ಯಾಂಕ್ಯೂ

ವ್ಹಾರೆ.. ವ್ಹಾರೆ ಮಾವ ನಿನ್ನ ಮಾತು
ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು 
ಊರಾ ಹೊರಗೆ ಹೊಂಟೆ ಆದ್ರೂ  ನಿನದು ತಂಟೆ 
ಓಹೊಯ್ ಓಯ್ ಹೊಯ್ ಹೇ.. ಮಳ್ಳಿ ಮೊರೆ ತಿವಿದು 
ಊರು ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತಾ ಇದ್ದೆ
ಅದಕೆ ಹಿಡಿಯಾಕ್ ಹೊಂಟೆ 
ಮಾತಲ್ಲಿ ಕುಣಿಸಿಬಿಟ್ಟ ಪ್ರಾಯ ಮುಟ್ಟಿದ
ಕೂಡಲೇ ಮನಸು ಮಾಯಾ 
ಓಯ್ ಮುದ್ದಾಟ ಇದ್ರೆ ತಾನೇ ಸಂತಸ

ಭಾರತೀ.. ವಾ ವಾ ವಾ ವಾ ವ
ಭಾರತಿ ಮುದ್ದು ಭಾರತಿ
ಯಜಮಾನಂತಿ ನಂಗೆ ನೀನೇ ಭಾರತಿ
ವರ್ಧನ ವಿಷ್ಣುವರ್ಧನಾ...
ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
ಯೋಯ್.. ಎದೆಯಲಿ ಝಳಕು
ಝಳಕು  ಹೊಡಿತು ಯಾಕೆ ಅಂತ 
ಕಣ್ಣು ಕುಕ್ಕಿತಪ್ಪ ನಿನ್ನ ವಯ್ಯಾರದ ಶರವಾತಿ
ಆಗಲೇ ಅಂದುಕೊಂಡೆ ನಾನು ನೀನೆ ಸತಿಪತಿ 

*********************************************************************************

No comments:

Post a Comment