ಬಾನಿಗೊಂದು ಎಲ್ಲೆ ಎಲ್ಲಿದೆ
ಚಲನಚಿತ್ರ: ಪ್ರೇಮದ ಕಾಣಿಕೆ (1976)ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ರಾಜ್ ಕುಮಾರ್
ನಿರ್ದೇಶನ: ವಿ. ಸೋಮಶೇಖರ್
ನಟರು: ರಾಜ್ ಕುಮಾರ್, ಆರತಿ
ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೇ ಆಗಲಿ ಅವನೇ ಕಾರಣ....
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನೇ ಬಂದರು ಅವನ ಕಾಣಿಕೆ......
*******************************************************************************
ಇದು ಯಾರು ಬರೆದ
ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಡಾ. ರಾಜ್ ಕುಮಾರ್
ಇದು ಯಾರು ಬರೆದ ಕಥೆಯೊ
ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ
ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ
ಬರಿ ಕನಸಾಯ್ತು ಸುಖ ಶಾಂತಿಯೆಲ್ಲ
ಇನ್ನು ಬದುಕೇಕೆ ಕಾಣೆನಲ್ಲ.....
ಹಾವ ಕಂಡ ಮೂಗನಂತೆ ಕೂಗಲಾರದೆ
ಕಾಡಿನೊಳು ನಿಂತಿಹೆ ದಾರಿ ಕಾಣದೆ
ಜೊತೆಯಾರಿಲ್ಲ ನಾ ಒಂಟಿಯಾದೆ
ನಗುವಿನ್ನೆಲ್ಲಿ ಸೋತುಹೋದೆ......
*********************************************************************************
ನಾ ಬಿಡಲಾರೆ ಎಂದೂ
ಸಾಹಿತ್ಯ: ವಿಜಯನಾರಸಿಂಹ
ಗಾಯಕರು: ರಾಜ್ಕುಮಾರ್, ವಾಣಿ ಜಯರಾಮ್
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಓ, ನಾ ಸೂರ್ಯಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವನಾಡಿ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾನೆ ರಾಗ ನೀನೆ ಭಾವ ಎಂದೆಂದೂ
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಆಹಾ ಮೈಮಾಟವು ಈ ಸವಿನೋಟವು
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಂದಾದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ತುಂಬೋ ಹೂವಾಗಿ
ಸಂಸಾರ ಸ್ವರ್ಗವಾಗಿ ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಕಂದ ಬಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ತುಂಬೋ ಹೂವಾಗಿ
ಸಂಸಾರ ಸ್ವರ್ಗವಾಗಿ ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
********************************************************************************
ನಗುವೆಯಾ ಹೆಣ್ಣೇ
ಸಾಹಿತ್ಯ: ವಿಜಯನಾರಸಿಂಹ
ಗಾಯಕರು: ಡಾ.ರಾಜ್ಕುಮಾರ್, ಹೆಚ್.ಪಿ.ಗೀತಾ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ
ನುಡಿಯ ಮರೆಯ ಬೇಡವೆ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ತಿಳಿಸಿದೆ ನೀತಿಯ ನುಡಿಗಳನು
ಕಲಿಸಿದೆ ನಡೆಯುವ ರೀತಿಯನು
ಎಂದೆಂದೂ ನಾ ನಿನ್ನ ಈ ಜಾಣ ನುಡಿಯ ಮರೆತು ಬಾಳೆನು
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
ನಿನಗೆ ನಾ ಸೋತು ಹೋದೆ
ನಿನಗೆ ನಾ ಸೋತು ಹೋದೆ
ನಿನಗೆ ನಾ ಸೋತು ಹೋದೆ
ನಗುವೆಯಾ, ನಗುವೆಯಾ
ನಗುವೆಯಾ, ನಗುವೆಯಾ
ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಕೆಯ ಹೂವಾದೆ ಒಲವಿನ ಜೇನಾದೆ ಬಿಡುವೆನೆ ನಾನು ನಿನ್ನ
ಬಿಡುವೆನೆ ನಾನು ನಿನ್ನ
ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಕೆಯ ಹೂವಾದೆ ಒಲವಿನ ಜೇನಾದೆ ಬಿಡುವೆನೆ ನಾನು ನಿನ್ನ
ಬಿಡುವೆನೆ ನಾನು ನಿನ್ನ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ
ನುಡಿಯ ಮರೆಯ ಬೇಡವೆ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
********************************************************************************
ಚಿನ್ನ ಎಂದು ನಗುತಿರು
ರಚನೆ: ಚಿ. ಉದಯಶಂಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು...
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು...
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು...
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸ್ನೇಹವ ತೋರು ಎಲ್ಲರ ಸೇರು
ಸ್ನೇಹವ ತೋರು ಎಲ್ಲರ ಸೇರು
ದಿನವೂ ಸಂತೋಷದಿ ನಲಿನಲಿದಾಡು
ದಿನವೂ ಸಂತೋಷದಿ ನಲಿನಲಿದಾಡು
ನೂರಾರು ವರುಷ ಕಂದ ಸುಖದಿ ಬಾಳು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಯಾರಲೊ ಕೋಪ ಯಾರಿಗೊ ತಾಪ ।
ಯಾರಲೊ ಕೋಪ ಯಾರಿಗೊ ತಾಪ
ಯಾರಲೊ ಕೋಪ ಯಾರಿಗೊ ತಾಪ
ದಿನವೂ ಇದೇನಿದು ಈ ಪರಿತಾಪ
ದಿನವೂ ಇದೇನಿದು ಈ ಪರಿತಾಪ
ದಿನವೂ ಇದೇನಿದು ಈ ಪರಿತಾಪ
ನೀ ತಾಯಿಯಂತೆ ಬಿಡು ಇನ್ನು ಚಿಂತೆ
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
********************************************************************************
ಪುಟ್ಟ ಪುಟ್ಟ
ರಚನೆ: ಚಿ. ಉದಯಶಂಕರ್
ಗಾಯಕರು: ಎಸ.ಜಾನಕಿ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು,
ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು,
ನಿಲ್ಲು ಅಲ್ಲೇ ಕೋಪ ಬಿಟ್ಟು
ಶೋಭಾ.. ಶೋಭಾ..
ತಾವರೆ ಹೂವು ಮೀರಿದ ಚಂದ
ತಾವರೆ ಹೂವು ಮೀರಿದ ಚಂದ
ತೇಲುವ ಮೋಡ ಬಾನಿಗೆ ಚಂದ
ಕಂದನ ನಗು ಬಾಳಿಗೆ ಚಂದ
ಹರುಷದಿ ಕುಣಿಯದೇ ನಲಿಯದೇ
ನನ್ನ ಚಿನ್ನ ಏನಿದೆ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು,
ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು,
ನಿಲ್ಲು ಅಲ್ಲೇ ಕೋಪ ಬಿಟ್ಟು
ಶೋಭಾ.. ಶೋಭಾ..
ಪ್ರೇಮದಿ ನಿನ್ನ ಅಮ್ಮನೇ ತನ್ನ...
ಪ್ರೇಮದಿ ನಿನ್ನ ಅಮ್ಮನೇ ತನ್ನ...
ಕಂದನ ಕೂಡಿ ಆಡಲು ನನ್ನ
ಸಲುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೇ ಸನಿಹಕೆ ಬಂದರೇ ..
ಸಿಹಿ ಮುತ್ತು ನೀಡುವೆ...
ಪುಟ್ಟ ಪುಟ್ಟ ಹೆಜ್ಜೆ ಇಟ್ಟು,
ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು,
ನಿಲ್ಲು ಅಲ್ಲೇ ಕೋಪ ಬಿಟ್ಟು
ಶೋಭಾ.. ಶೋಭಾ..
********************************************************************************
No comments:
Post a Comment