Friday, August 31, 2018

ಎ.ಕೆ.47 (1999)


ಕಡಲೊ ಕಡಲೊ

ಚಲನಚಿತ್ರ: ಎ.ಕೆ.47 (1999)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ 
ಗಾಯನ: ಹರಿಹರನ್, ಕೆ. ಎಸ್. ಚಿತ್ರಾ 
ನಿರ್ದೇಶನ: ಓಂ ಪ್ರಕಾಶ್ ರಾವ್ 
ನಟನೆ: ಶಿವರಾಜ್ ಕುಮಾರ್, ಚಾಂದಿನಿ, ಓಂಪುರಿ, ಗಿರೀಶ್ ಕಾರ್ನಾಡ್ 


ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 


ಮನದ ಬನದ ಒಂಟಿ ಮರದ ಆಸೆ ರೆಂಬೆಗೆ 
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ 
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ 
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ 
ನಾನು ಹೆಣ್ಣೇ ಕಾಣದೇ 
ನನಗೂ ಒಂದೂ ಮನಸಿದೆ 
ತುಟಿಗಳು ಎರಡು ಭಯದಲಿ ನಿಂತು 
ಬಿಗಿಯಿತು ಬೀಗಗಳ 

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...


ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ 
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು 
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು 
ಕಡಲಿಗೆ ಎರಡೂ ತೀರವಿದೆ 
ಮುಗಿಲಿಗೆ ಕೊನೆಯೇ ಕಾಣದಿದೆ 
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ 

ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ 
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...


********************************************************************************

ನಾನು ಕನ್ನಡದ ಕಂದ

ಸಾಹಿತ್ಯ: ಹಂಸಲೇಖ 
ಗಾಯನ: ಕೆ. ಜೆ. ಯೇಸುದಾಸ್ 


ಅಮ್ಮಾ... 
ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 

ಎದೆ ಹಾಲುಂಡು ಎದೆ ಬಗೆದವರ
ಕ್ಷಮಿಸುವುದುಂಟೆ, ಬೆಳೆಸುವುದುಂಟೆ
ಬೇಲಿಗೆ ಮದ್ದು ಹಾಕದೆ ಇದ್ರೆ
ನೆರಳಿನ ಮರವು ಉಳಿಯುವುದುಂಟೆ
ಅಮ್ಮಾ... 

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 

ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೆ ನಿನಗೆ
ಶಾಂತಿಯ ಧ್ವಜವೆ ಕೀರ್ತಿಯ ಭುಜವೆ
ಧರ್ಮದ ಚಕ್ರ ವಂದನೆ ನಿನಗೆ
ಅಮ್ಮಾ... 

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 


*******************************************************************************

ಓ ಮೈ ಸನ್ 

ಸಾಹಿತ್ಯ: ಹಂಸಲೇಖ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಓ ಮೈ ಸನ್ 

ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗೂ
ನಾಡಿನ ಒಳ್ಳೆಯ ಪ್ರಜೆಯಾಗು 
ಓ ಮೈ ಸನ್ 

ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು 

ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನಯ ಎಂಬ ಅಸ್ತ್ರ ಒಂದು ತಾಯ ಕೊಡುಗೆ
ದ್ರೋಹಿ ಎಂಬ ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು 

ಓ ಮೈ ಸನ್ 
ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು 

ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀ ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು 

ಓ ಮೈ ಸನ್
ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ 

ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೆ ಅಪರಾಧ ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ
ಸಾವಿರ ಎರಡು ಸಾವಿರ ವರ್ಷದ ಮಹಾ ಮನ್ವಂತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ 

ಓ ಮೈ ಸನ್
ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ 

******************************************************************************

No comments:

Post a Comment