
ದೇಹವೆಂದರೆ ಓ ಮನುಜ
ಚಲನಚಿತ್ರ: ಜನುಮದ ಜೋಡಿ (1996)ಸಾಹಿತ್ಯ & ಸಂಗೀತ: ವಿ.ಮನೋಹರ್
ಗಾಯಕರು: ಡಾ|| ರಾಜ್ಕುಮಾರ್
ನಿರ್ದೇಶನ: ಟಿ. ಎಸ್. ನಾಗಾಭರಣ್
ನಟನೆ: ಶಿವರಾಜ್ ಕುಮಾರ್, ಶಿಲ್ಪಾ

ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ
ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ
ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪ ದೀಪದಿ ಶಿವನಿಲ್ಲ
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪ ತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣ ಕಣದಲ್ಲು ಜೀವ ಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು
ದೇಹವೆಂದರೆ....
ಮೇಳು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲ ವ್ಯಾಕುಲಗಳು ಸರಿಯೇನು
ರೋಷ ದ್ವೇಷದ ಉರಿಯು ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೆ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ
ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ
ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ
ನೀತಿ ಮಾರ್ಗವೇ ಭವನಾಶ
********************************************************************************
ಮಣಿ ಮಣಿ ಮಣಿ ಮಣಿ
ಸಾಹಿತ್ಯ : ವಿ. ಮನೋಹರ್ ಹಾಡಿರುವವರು : ಶಿವರಾಜ್ ಕುಮಾರ್,
ಮಂಜುಳಾ ಗುರುರಾಜ್
ಗಂ : ಹ್ಞೂ ಹ್ಞೂ ಹ್ಞೂ ಹ್ಞೂ ಹ್ಞೂ.........
ಮಣಿ ಮಣಿ ಮಣಿ ಮಣಿ ಮನಿಗೊಂದು ದಾರ
ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
ತಾನಿ ತಂದಾನಿ ತಂದಾನ ತಂದಾನಿ ತಂದಾನ
ತಂದಾನಿ ತಂದಾನ ತಂದಾನನ
ತಾನಿ ತಂದಾನಿ ತಂದಾನ ತಂದಾನಿ ತಂದಾನ
ತಂದಾನಿ ತಂದಾನ ತಂದಾನನ
ನಿನ್ನ ಹೆಸರೇನೋ ಮಣಿ ಅಂತ ಗೊತ್ತಾಯ್ತು.
ಆದರೆ ಮಣಿ ಜೊತೆ ಇರೋ ದಾರದ ಹೆಸರೇ ಗೊತ್ತಾಗ್ಲಿಲ್ವಲ್ಲೇ....
ಹೆ: ಮಣಿ ಜೊತೆ ದಾರ ಇರೋಲ್ಲ.
ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೇ ಮಣಿ
ಗಂ: ಗೊತ್ತಾಯ್ತ ಗೊತ್ತಾಯ್ತ.
ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
ಒಸಿ ಉದಾರ ವಾಗ ಹೇಳಿದ್ರೆ ಆಗೋದಿಲ್ವಾ.
ಹೆ: ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು
ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ
ಗಂ: ಏನೋ ಹೆಸರು ಕೇಳಿದರೆ ಕೆಸ್ರಲ್
ಬಿದ್ದೊರ್ ಥರ ಆಡಬಾರದು ಅಂತ ಹೇಳೇ ಮಣಿ.
ಹೆ: ನಮ್ಮ್ ಹೆಸ್ರು ಮಾತ್ರ ಕೇಳಿ ತಮ್ಮ ಹೆಸ್ರು ಹೇಳ್ದೆ
ಇರೋದ ಬಾಲ್ ಮೋಸ ಅಂತ ಹೇಳೇ ಮಣಿ.
ಗಂ: ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣಕೃಷ್ಣಕೃಷ್ಣ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ಹೆ: ಹಂಗಾರೆ. ಗೋಪಿಕ ಸ್ತ್ರೀಯರು ಈಗಲೂ
ಇದಾರಾ ಅಂತ ಕೇಳ್ಬಿಡೆ ಮಣಿ.
ಗಂ: ಚೇ ಚೇ ಅದೆಲ್ಲ ದ್ವಾಪರ ಯುಗಕ್ಕೆ.
ಈ ಕಲಿಯುಗದ ಕೃಷ್ಣ ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಹೆ: ನನ್ನು ನೋಡಲ್ವಾ??
ಗಂ: ನೋಡ್ತಾನೆ ಇದೀನಲ್ಲ. ಮಾತು ಮಾತಲ್ಲೇ ಮಾತು
ಮರಸ್ ಬ್ಯಾಡ ಅಂತ ಹೇಳೇ ಮಣಿ
ಇವಗಲ್ಲಾದ್ರು ಹೆಸರನ್ನ ಹೇಳೆಲೆ ಕನ್ಯಾಮಣಿ
ಹೆ: ನನ್ನ್ ಹೆಸರು ಒಂದು ಹೂವಿನ ಹೆಸರ್ ನಾಗೆ
ಸೇರ್ಕೋoಡೈತೆ ಅಂತ ಹೇಳೇ ಮಣಿ
ನನ್ನ್ ಹೆಸರು ಒಂದು ಹೂವಿನ ಹೆಸರ್ ನಾಗೆ
ಸೇರ್ಕೋ0ಡೈತೆ ಅಂತ ಹೇಳೇ ಮಣಿ
ಗಂ: ಅದು ಯಾವ ಹೂವು ಅದು ಯಾವ ಹೂವು.
ನೆಲದ ಮ್ಯಾಲೈತೋ ಅಂಬರ ದಾಗೈತೋ
ಗೊತ್ತಗ್ಲಿಲ್ವಲೇ ಮಣಿ ಕಣ್ಮಣಿ
ಹೆ: ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ
ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ
ಅಂತ ಹೇಳೇ ಮಣಿ ಬೇಗ ಹೇಳೇ ಮಣಿ
ಗಂ: ಅಂಬರಕ್ಕೆ ಚಾಚ್ಕೋoಡೈತೆ ಅಂಬರ ಅಂದ್ರೆ ಕನಕಾಂಬರ
ಕನಕ ಕನಕ ಕನಕ ಕನಕ ಕನಕ ಕನಕ ಕನಕ ಕನಕ..
ಕನಕ ಕನಕ ಎಷ್ಟು ಚೆಂದಾಗೈತೆ.
ಕನಕ ಕನಕ ಅಹಹ ಮುದ್ದಾಗೈತೆ
ಮಣಿ: ಹೌದು ಹೌದು ಚೆಂದಾಗೈತೆ ಈಗ
ಊರ್ ಹತ್ರಕ್ಕ್ ಬಂದೈತೆ ಗಾಡಿ ನಿಲ್ಸು
ಅಂತ ಹೇಳೇ ಕನಕ,
********************************************************************************
ಇವನ್ಯಾರ ಮಗನೋ
ಸಾಹಿತ್ಯ: ವಿ.ಮನೋಹರ್ಗಾಯಕರು: ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್

ಇವಳ್ಯಾರ ಮಗಳೋ ಹಿಂಗವ್ಳಲ್ಲ
ಮಾಲಕ್ಷ್ಮಿ ರೂಪ ಶೂರ ಈ ಭೂಪ
ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು
ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು
ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು
ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ
ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಇವಳೇನ ಸಿರಿದೇವಿ ಹಾಂ ಹಾಂ ಹಾಂ
ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ
ಶಿವನೇ ಅವತಾರನ ಎತ್ತಿ ಬಂದಾನೊ
ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
ಪಾರ್ವತಿ ಈ ವೇಷ ತಾಳಿ ಬಂದಾಳೊ
ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ
ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
ಒಲಿದಾರೆ ಇವನಿಗೆ ಹಾಂ ಹಾಂ ಹಾಂ
********************************************************************************
ಜನುಮ ಜೋಡಿ ಆದರು
ಸಾಹಿತ್ಯ: ವಿ.ಮನೋಹರ್ ಗಾಯಕರು: ಡಾ||ರಾಜ್ ಕುಮಾರ್
ಜನುಮ ಜೋಡಿ ಆದರು ಏಕೆ ಅಂತರ
ಜೀವ ಜೀವ ನಡುವಲಿ ಏಕೆ ಕಂದರ
ಮಧುರ ಗೀತೆ ಕೂಡ ಹೀಗೇಕೆ ಘೋರ
ಕಡಲೀನ ಒಡಲು ಮುಗಿಲೀನ ಸಿಡಿಲು
ಮಳೆ ಮಿಂಚು ಸೆಳೆತ ಬಾಳೆಲ್ಲವು
ಎಲೆ ಮೇಲೆ ಹನಿಯು ಮುತ್ತಂಥ ಮಣಿಯು
ಬಿರುಗಾಳಿ ಬೀಸಿ ಸುಳಿಯಾದವು
ನೆರೆ ಬಂದು ಸೆರೆಯಾಯ್ತು ಎದೆಯಾಳದಿ
ಕಣ್ಣೀರೆ ಮಾತಾಯ್ತು ಮನದಾಳದಿ
ಹೊರಗೆ ನಗೆಯ ಲೀಲೆ ಒಳಗೆ ಜ್ವಾಲೆ
ಕನಸೆಲ್ಲ ಬೆಂದು ಬರಿದಾಗೊ ಬದಲು
ನನಸಾಗೊ ವೇಳೆ ಬರಬಾರದೆ
ಈ ಜೀವವೆರಡು ಒಂದೊಂದು ತೀರ
ದಡ ತೋರೊ ದೋಣಿ ಸಿಗಬಾರದೆ
ಶುಭದ ಶಕುನವೆ ವರವಾಗು ಬಾ
ಅಂಗೈಯ ಗೆರೆಯೆ ಬದಲಾಗಿ ಬಾ
ಕರಗಲೀಗ ಬೇಗ ಕರಿಮುಗಿಲು ದೂರ
********************************************************************************
ಜನುಮದ ಜೋಡಿ ನೀನು
ಸಾಹಿತ್ಯ: ವಿ.ಮನೋಹರ್ಗಾಯಕರು: ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್
ಗಂ: ಜನುಮದ ಜೋಡಿ ನೀನು ಕನಕ ಕನಕ
ಹುಡುಗನ ಪ್ರಾಣ ನೀನು ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ
ಮಾಲೆ ಮಾಲೆ ಮಾಲೆ ಮಾಲೆ ಮಲ್ಲೆ ಹೂಮಾಲೆ
ಹೆ: ಜನುಮದ ಜೋಡಿ ನೀನೆ ಪ್ರಾಣ ಪದಕ

ಹೆ: ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೆ ತೊಡಿಸಿದೆ ನೀ ಮುತ್ತಿನ ಒಡವೆ
ಗ: ಒಡವೆ ತೊಡದೇನೆಯೂ ಚೆಲುವೇರ ಚೆಲುವೆ
ಎದೆ ತುಂಬಿಕೊಳ್ಳಲು ನಿನ್ನಾ ಪಡೆವೆ
ಹೆ: ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ
ಗೆಲುವ ತರುವ ವರವೆ
ಗಂ: ಅದು ಯಾವ ಜನುಮದಲೊ ಆಗೈತೆ
ನನಗು ನಿನಗು ಮದುವೆ
ಹೆ: ನಿನ್ನ ಜೋಡಿ ಮಾಡಿದ ಆ ದೇವಗೆ
ಕೈಯ್ಯ ಮುಗಿವೆ ಮುಗಿವೆ
ಗಂ: ಮೊದಲನೇ ನೋಟದಾಗೆ ಸೆಳೆದೆ ನೀ ಮನಸ
ಶಿವರಾತ್ರಿ ತಂದೆ ನೀ ದಿವಸ ದಿವಸ
ಹೆ: ನಂಗೂ ಹಂಗಾಗೈತೆ ಕೇಳಯ್ಯ ಅರಸ
ಒಳಗೊಳಗೆ ಹಾಡೈತೆ ಹೃದಯ ಸರಸ
ಗಂ: ನೆಲ ಮುಗಿಲು ಸೇರಿದರು ಬೇರಾಗದು
ನಮ್ಮ ಬಾಳ ಕಳಸ
ಹೆ: ಒಡಲಾಳ ಚಂದದಲಿ ಹೇಳೈತೆ
ಪ್ರೀತಿ ಕಥೆಯ ಸೊಗಸ
ಗಂ: ನಮ್ಮ ಬದುಕ ಹರಕೆಯ ಪೂರೈಸಲು
ದಿನವು ಹರುಷ ಹರುಷ
*********************************************************************************
ಕೋಲು ಮಂಡೆ ಜಂಗುಮ ದೇವರು
ಸಾಹಿತ್ಯ: ವಿ. ಮನೋಹರ್ ಗಾಯಕರು: ಎಲ್. ಎನ್. ಶಾಸ್ತ್ರೀ
ಹೇ ಮಾತ್ಮಲ್ಲಯ್ಯ, ಹೇ ಮಾತ್ಮಲ್ಲಯ್ಯ
ಕೋಲು ಮಂಡೆ ಜಂಗುಮ ದೇವರು
ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕೊಡುವಾಗ್ಲೆಲ್ಲ ಕೊಡ್ತಾನೊ ನಮ್ಮಪ್ಪ ಶಿವ
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವ
ಅಕ್ಕರೆ ಮಾತಾಡಿ ಭಿಕ್ಷೆ ಆಕವ್ವ ಅಂದೌವ್ನೆ ಮಾದೇವ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ತಾಯಿ ಅಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ
ಲಗ್ನ ಆಗ್ದೇ ಇರೊ ಯೆಣ್ಮಗಳು ತಾಯಿ
ಭಿಕ್ಷೆ ನೀಡುದ್ರೆ ಬಾಳು ಬಂಗಾರ ತಾಯಿ
ಬೈದ್ ದೂಡುದ್ರೆ ಬಾಳು ಬೂದ್ಗುಂಬಳಕಾಯಿ
ಅಂದೌನೆ ಮಾದೇವಾ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಉಡ್ಗಿ ಅಂದ್ರೆ ಚಿಕ್ಕ್ ಉಡ್ಗಿ ಅಲ್ಲ ತಾಯಿ
ಕಂಕಣ ಬಾಗ್ಯ ಬರೊ ಕನ್ಯಾಮಣಿ ತಾಯಿ
ಭಿಕ್ಷೆ ನೀಡುದ್ರೆ ಸಿರಿ ಸಿಂಗಾರ ತಾಯಿ
ಬೈದ್ ದೂಡುದ್ರೆ ನಿಮ್ ಬಾಳು ಬೆಂಡೇಕಾಯಿ
ಅಂದೌವ್ನೆ ಮಾದೇವಾ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ

ಹೆತ್ತೌವ್ರ ಪುಣ್ಯವು ಗುಟ್ಟಾಗಿ ಬಂತಮ್ಮೋ
ಮುತ್ತಂಥ ಭಾಗ್ಯವ ಬಾಗಿಲಿಗೆ ತಂತಮ್ಮೋ
ದೇವರ ಗುಡ್ಡ ಬಂದು ಭಕ್ತಿಇಂದ ಶಿವನ ನೆನೆದು ಹಾಡಿ
ಭೂದೇವಿ ಕೈಯ ಚಾಚಿ ಆಕಾಶಾನ ಮುಟ್ಟೋತಾವು ನೋಡಿ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಬನವೆಲ್ಲ ಹೂವಾದೋ ಹೂವೆಲ್ಲ ಗಮ್ಮೆಂದೊ
ಕೈ ಎತ್ತಿ ಕ್ವಾರುಣ್ಯ ಭಿಕ್ಷೆಯ ನೀಡೌವೋ
ಮಾದೇವ್ನ ಮನಸಾರೆ ರಕ್ಷೆಯ ಕೇಳವ್ವೋ
ನೆತ್ತಿಯ ಸೂರ್ಯ ಸ್ವಾಮಿ ಕತ್ಲೆ ಮನಗೆ ಓಗೊ ಒತ್ತು ಆಡು
ಚಿತ್ತಾವ ಗಟ್ಟಿ ಮಾಡಿ ಇತ್ತಾಗಿ ಕುಳಿತ್ರೆ ಮುತ್ತು ನೋಡೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಕಾದೋರ್ಗೆ ಕಾಣ್ತಾನೋ ಕಂಡೋರ್ಗೆ ನೀಡ್ತಾನೋ
ಮುಂಗಾರ ಮಳೆಬರಲು ಸೋಗೆಯು ಕುಣಿದಾವೋ
ಬಾಯಾರಿ ನೆಲದೊಡಲ ಕಣಕಣವು ಮಣಿದಾವೋ
ಕೋಡ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ ಬರುತಾನವ್ವೋ
ನಂಬಿದ ಭಕ್ತರಿಗೆಂದು ಪ್ರೀತಿಯ ಕೊಟ್ಟೆ ಕೊಡುತಾನವ್ವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
********************************************************************************
ಸೀರೆ ಸೀರೆ ಎಲ್ಲೆಲ್ಲೋ
ಸಾಹಿತ್ಯ: ವಿ.ಮನೋಹರ್
ಗಾಯಕರು: ಸಂಗೀತಾ ಕಟ್ಟಿ
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಮಾವು ಬೇವು ಚಿಗುರಿದರೆ ಚೈತ್ರ ವೈಶಾಖ
ಮಾವ ನಿನ್ನ ಕಂಡಾಗ ಬಂತು ಮೈ ಶಾಖ
ನೋಡು ಹೊಸ ಹರೆಯ ಮಾಡಿ ಮೈ ಬಿಸಿಯ
ಉಟ್ಟ ಸೀರೆ ಮೈಯ ಮೇಲೆ ನಿಲ್ಲದೋ
ಸೆರಗು ಹಾರಿ ನೆರಿಗೆ ಜಾರಿ ಹೋಯಿತು
ನಡುವ ನೀನು ಬಳಸಿ ಎದೆಯ ಬಿಸಿಗೆ
ಪ್ರೇಮ ಬೆಸುಗೆ ಹಾಕು... ಬಾ...
ಸೆರಗು ಹಾರಿ ನೆರಿಗೆ ಜಾರಿ ಹೋಯಿತು
ನಡುವ ನೀನು ಬಳಸಿ ಎದೆಯ ಬಿಸಿಗೆ
ಪ್ರೇಮ ಬೆಸುಗೆ ಹಾಕು... ಬಾ...
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಮಾಗಿಯ ಕಾಲದಲಿ ದೂರ ಇರಬ್ಯಾಡಾ
ಇರುಳಲಿ ಒಂಟಿಯಾಗಿ ಬಿಟ್ಟೋಹೋಗಬ್ಯಾಡ
ಸುರಿಯೋ ಮಳೆಯಲ್ಲಿ ಕೊರೆಯೋ ಚಳಿಯಲ್ಲಿ
ಸೆರೆಗಿನಲ್ಲಿ ನಿನ್ನ ಮುಚ್ಚಿಕೊಳ್ಳುವೆ
ಬೊಗಸೆ ತುಂಬಾ ಸುಖವ ಹಂಚಿ ಕೊಳ್ಳುವೆ
ಇಂದು ಎಂದೆಂದೂ ನೀನೇ ನನ್ನ ಮಾವ ನನ್ನ ಜೀವ ಓಡಿ... ಬಾ.....
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
*********************************************************************************
ಓ ಊರ ದ್ಯಾವರೇ
ಸಾಹಿತ್ಯ: ವಿ.ಮನೋಹರ್
ಗಾಯಕರು: ಶಿವರಾಜ್ ಕುಮಾರ್, ಮಂಜುಳಾ ಗುರುರಾಜ್
ಹೇ... ಊರ ದ್ಯಾವರೇ ಓ ಬೇರೇ ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ಮೊಗಸೋಕೆ ಕಳಸವನೇ ಜವರಾಯ್ ನೆಂಟ್ರ್
ನೋಡಿದ್ರು ಸುಮ್ಕಿದ್ದೀ ನಿಂಗವ್ರು ನೆಂಟ್ರ್
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ಮೊಗಸೋಕೆ ಕಳಸವನೇ ಜವರಾಯ್ ನೆಂಟ್ರ್
ನೋಡಿದ್ರು ಸುಮ್ಕಿದ್ದೀ ನಿಂಗವ್ರು ನೆಂಟ್ರ್
ಊರ ದ್ಯಾವರೇ ಓ ಕ್ರೂರ ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಊರ ದ್ಯಾವರೇ ಓ ಬೇರೇ ದ್ಯಾವರೇ
ಮುತ್ತಿನ ನಕ್ಕತೈತಿ ಕತ್ತಿನ ಸರವೈತಿ
ಹಣೆ ಮ್ಯಾಲೆ ಕುಂತೈತಿ ಬೊಟ್ಟು ಬಾಸಿಂಗ
ದೊಡ್ಡ ಸೀರೆ ಉಟ್ಟಕೊಂಡು ಅರಿಷಣ ಹಚ್ಚಕೊಂಡು
ಹಸಿ ಮಣೆ ಏರಿತೀನಿ ಬಾರೋ ಮಧುಲಿಂಗಾ..
ಏ... ನಿಂಗ್ ಕೊಬ್ಬ್ ಹೆಚ್ಚಾಯ್ತಾ ತಲೆ ಕೇಟ್ ಕೆರವಾಯ್ತ
ನಿಂಗ್ ಘರ್ ಬಡಿಯಾ ನಿಂಗ್ ಕುಲ್ ಹಿಡಿಯ್
ನಿನ್ ಸದೆಬಡಿಯಾ ನಿನ್ ತಲೆ ಒಡೆಯಾ
ಹಣೆ ಮ್ಯಾಲೆ ಕುಂತೈತಿ ಬೊಟ್ಟು ಬಾಸಿಂಗ
ದೊಡ್ಡ ಸೀರೆ ಉಟ್ಟಕೊಂಡು ಅರಿಷಣ ಹಚ್ಚಕೊಂಡು
ಹಸಿ ಮಣೆ ಏರಿತೀನಿ ಬಾರೋ ಮಧುಲಿಂಗಾ..
ಏ... ನಿಂಗ್ ಕೊಬ್ಬ್ ಹೆಚ್ಚಾಯ್ತಾ ತಲೆ ಕೇಟ್ ಕೆರವಾಯ್ತ
ನಿಂಗ್ ಘರ್ ಬಡಿಯಾ ನಿಂಗ್ ಕುಲ್ ಹಿಡಿಯ್
ನಿನ್ ಸದೆಬಡಿಯಾ ನಿನ್ ತಲೆ ಒಡೆಯಾ
ಊರ ದ್ಯಾವರೇ ಓ ಘೋರ್ ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ನೆತ್ತರ್ ಹರಿಸೋಕೆ ದಂಡ್ ದಂಡು ಬಂದ್ರು
ಪ್ರೀತಿ ಅರಳಿದ ಗುಂಡಿಗೆನೇ ಕಿತ್ತರೂ
ಊರ ದ್ಯಾವರೇ ಓ ಕುಲದು ದ್ಯಾವರೇ
ಮೈಲಿಗೇ ಇಲ್ಲದ ಮಲ್ಲಿಗೆ ಹೂವಿಗೂ
ಪೂಜೆಯಾ ವೇಳೆಗೆ ಬಂತು ಬರ ಸಿಡಿಲು
ಸತ್ತರೂ ಸರಿಯೇ ಸುಟ್ಟರೂ ಸರಿಯೇ
ನನ್ನವನ ಸೇವೆಗೆ ಮಾತ್ರ ಈ ಒಡಲು
ಏ...ನನ್ ಮನೆ ಮುರದವನೇ ನನ್ ಎದೆ ಒದ್ದೋನೆ
ಮುಳ್ಳಾದವನೇ ನೀ ಹಾಳಾಗ್ ನೀ ನೆಗದ ಬೀಳಾ
ನಿಂಗ್ ಹುಳಾ ಬೀಳಾ
ಪೂಜೆಯಾ ವೇಳೆಗೆ ಬಂತು ಬರ ಸಿಡಿಲು
ಸತ್ತರೂ ಸರಿಯೇ ಸುಟ್ಟರೂ ಸರಿಯೇ
ನನ್ನವನ ಸೇವೆಗೆ ಮಾತ್ರ ಈ ಒಡಲು
ಏ...ನನ್ ಮನೆ ಮುರದವನೇ ನನ್ ಎದೆ ಒದ್ದೋನೆ
ಮುಳ್ಳಾದವನೇ ನೀ ಹಾಳಾಗ್ ನೀ ನೆಗದ ಬೀಳಾ
ನಿಂಗ್ ಹುಳಾ ಬೀಳಾ
ಊರ ದ್ಯಾವರೇ ಓ ಕೆಟ್ಟ ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಊರ ದ್ಯಾವರೇ ಯಾವ್ ಊರ ದ್ಯಾವರೇ
ನೀ ಎಕ್ಕುಟ್ ಹೋಗ್ ನೀನ್ ಮನೆ ಕಾಯೋಗ್
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ್ ಬೀಸಿದರೂ ಕೊಯ್ದರಲ್ಲೋ ಕತ್ನಾ
ಊರ ದ್ಯಾವರೇ ಯಾವ್ ಊರ ದ್ಯಾವರೇ
*********************************************************************************
No comments:
Post a Comment