ಚಲನಚಿತ್ರ: ಕವಿರತ್ನ ಕಾಳಿದಾಸ (1983)
ಸಾಹಿತ್ಯ: "ಸಾಹಿತ ರತ್ನ" ಚಿ. ಉದಯಶಂಕರ್
ಸಂಗೀತ: ಎಂ. ರಂಗಾ ರಾವ್
ಗಾಯಕರು: ಡಾ. ರಾಜ್ ಕುಮಾರ್, ವಾಣಿ ಜಯರಾಂ
ನಿರ್ದೇಶನ: ರೇಣುಕಾ ಶರ್ಮಾ
ನಟರು: ರಾಜ್ ಕುಮಾರ್, ಜಯಪ್ರದ
ಆ.......
ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಕಣ್ಣೆರಡು ಕಮಲಗಳಂತೆ
ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ
ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ
ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು
ಗುಡುಗುಗಳು ತಾಳದಂತೆ
ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ ಪನ್ನೀರ
ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು
ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು
ಸೋತೆ ನಾನು
ಸದಾ ಕಣ್ಣಲೆ.......
*********************************************************************************
ಮಾಣಿಕ್ಯ ವೀಣಾ
ಸಾಹಿತ್ಯ: ಶ್ಯಾಮಲಾ ದಂಡಕಮ್ಗಾಯಕರು: ಡಾ. ರಾಜ್ ಕುಮಾರ್
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾಂ ಉಪಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಆ......
ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ.. ಜಗದೇಕಮಾತಹಾ..ಆ..
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಆ.....
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...
ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...
ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯ್ವಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮ
ಲಾಕ್ಷಾರ ಸಾರುಣ್ಯ
ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
ಪುರುಚಿನನವರತ್ನ ಪೀಠಸ್ಥಿತೇ, ಸುಸ್ಥಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...
ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ..
ಹೇ ಜಗನ್ಮಾತೃಕೇ ಪಾಹಿ ಮಾಂ
ಪಾಹಿ ಮಾಂ ಪಾಹಿಮಾಂ ಪಾಹೀ
*********************************************************************************
ಅಳ್ಬ್ಯಾಡ್ ಕಣೇ
ಸಾಹಿತ್ಯ: ಚಿ. ಉದಯಶಂಕರ್ಗಾಯನ: ಡಾ| ರಾಜ್ಕುಮಾರ್
ಅಳ್ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೆ ಸುಮ್ಕಿರೆ ಏಯ್..ಏಯ್...ಏಯ್..ಏಯ್
ವೀರನಂಥ ಶೂರನಂಥ ಮಾರನಂಥ ಗಂಡ ನಾನು
ಏಕೆ ಅಳ್ತಾ ನಿಂತುಕೊಂಡೆ ಅಳ್ಬುರ್ಕಿಯಂತೆ
ನನ್ನ ಮ್ಯಾಲೆ ನಿನಗೆ ಕೋಪಾ ಯಾಕೆ
ಕೇಳೆ ಇಲ್ಲೇ ನಿನ್ನ ಮುದ್ದಾಡ್ಬೇಕೆ
ನೆತ್ತಿ ಮೇಲೆ ಹೊತ್ತು ನಿನ್ನ
ಬೆಟ್ಟಾನಾದ್ರೂ ಹತ್ತುತೀನಿ
ಶಾಲೇನಾದ್ರೂ ಒಕ್ಕೊಡ್ತೀನಿ
ಸುಮ್ಕಿರು ಮತ್ತೆ ನೀ ಸುಮ್ಕಿರು ಮತ್ತೆ
ಹೇ.. ಹೆಹೆಹೆ..ಹೇ..
ಅಳ್ಬ್ಯಾಡ್ ಕಣೇ ಸುಮ್ಕಿರೆ
ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಏಯ್..ಏಯ್..ಏಯ್..ಏಯ್
ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ ಹೌದು ಚಿನ್ನ
ಬೆಟ್ಟಾದ ಕೆಳಗೆ ಆಲದ ಮರವೊಂದೈತೇ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ನಾನು ನೀನು ಕೂಡಿಕೊಂಡು ಕುರಿಗಳ್ನಲ್ಲಿ ಮೇಯಿಸ್ಕೊಂಡು
ಬಿಸಿಲಾಗ್ ಅಲ್ದು ಹಿಟ್ಟು ಉಂಡು
ಒಂಗೆ ನೆರಳಲ್ ಕಂಬ್ಳಿ ಬೀಸಿ
ಜೋಡಿ ಕುರಿಗಳಂಗೆ ನಾವು ಮಲ್ಗಿಕೊಳ್ಳೋಣ
ಸೇರಿ ಗೊರ್ಕೆ ಹೊಡ್ಯೋಣ ಗೊರ್ರ್...ಗೊರ್ರ್
ಹೇ.. ಹೆಹೆಹೆ.. ಹೇ..
ಅಳ್ಬ್ಯಾಡ್ ಕಣೇ ಸುಮ್ಕಿರೆ
ನನ್ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ
ಏಯ್..ಏಯ್...ಏಯ್..ಏಯ್
ಮುಂಜಾನೆ ಸೂರ್ಯ ಅಂದ
ಅಕ್ಕಿಗಳ ಚಿಲಿಪಿಲಿ ಚಂದ
ಆಹ ಆಹ ಆಹ ಏನ್ ಹೇಳ್ಲಿ ಅದ್ರ ಅಂದಾವಾ?
ಮುಂಜಾನೆ ಸೂರ್ಯ ಅಂದ
ಅಕ್ಕಿಗಳ ಚಿಲಿಪಿಲಿ ಚಂದ
ಬೀಸೋ ಗಾಳಿ ತೂಗೋ ಮರವಾ
ಹರಿಯೋ ನದಿಯಾ ಕಾಣೋಣಾ
ಗುಡುಗೊ ಸಿಡಿಲೊ ಚಳಿಯೊ ಮಳೆಯೊ
ದಿನವೂ ಅಲೆಯೋಣ ಬಾ.. ಹ ಹ ಹ ಹ ಹಾ..
ಅಳ್ಬ್ಯಾಡ್ ಕಣೇ ಸುಮ್ಕಿರೇ ನನ್ನ ಮುದ್ದಿನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್ಬ್ಯಾಡ್ ಕಣೇ ಸುಮ್ಕಿರೆ ಏಯ್ ಏಯ್ ಏಯ್ ಏಯ್..
ತಳಾಂಗು ತದಿಗಿಣತೋಂ ||೩ ಸಲ ||
ಅಯ್ಯಯ್ಯಪ್ಪಾ...
********************************************************************************
ಓ ಪ್ರಿಯತಮಾ
ಸಾಹಿತ್ಯ: ಚಿ.ಉದಯಶಂಕರ್ಗಾಯನ: ಡಾ. ರಾಜ್ಕುಮಾರ್, ವಾಣಿ ಜಯರಾಂ
ಓ.... ಓ....ಓ ಪ್ರಿಯತಮಾ ||೨||
ಪ್ರಿಯತಮಾ.. ಕರುಣೆಯಾ ತೋರೆಯಾ ||೩||
ಸನಿಹಕೇ ಬಾರೆಯಾ ತೀರಿಸೀ ಬಯಕೆಯಾ
ಜೀವವಾ ಉಳಿಸೆಯಾ ಪ್ರಿಯತಮಾ
ಓ.... ಓ.... ಪ್ರಿಯತಮಾ
ಹಗಲಲೀ ಇರುಳಲೀ ಕನಸಲೀ ಮನಸಲೀ ||೨||
ಬಳಲಿದೆ ಬೆಚ್ಚಿದೆ ನೆನಪಿನ ಸುಳಿಯಲಿ
ಬೆವರುತ ಚಳಿಯಲಿ ಬೆದರುತ ಭಯದಲಿ ||೨||
ವಿರಹದಾ ಉರಿಯಲಿ ಬೆಂದೆನೂ ನೋವಲಿ
ಯಾರಿಗೆ ಹೇಳಲಿ ಏನನು ಮಾಡಲಿ ||೨||
ಪ್ರಿಯತಮಾ ಓ... ಓ....ಓ ಪ್ರಿಯತಮಾ
ಓ.... ಓ....ಓ ಪ್ರಿಯತಮೇ ||೨||
ಕರುಣೆಯಾ ತೋರೆಯಾ ||೩||
ಸನಿಹಕೇ ಬಾರೆಯಾ
ತೀರಿಸೀ ಬಯಕೆಯಾ
ಜೀವವಾ ಉಳಿಸೆಯಾ
ಪ್ರಿಯತಮೇ ಓ..... ಓ.....ಓ ಪ್ರಿಯತಮೇ
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ ||೨||
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ ||೨||
ವಿರಹದಾ ಗೀತೆಯಾ ಹಾಡಿದೆ ಕಿವಿಯಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ ||೨||
ಪ್ರಿಯತಮೇ ಓ... ಓ...ಓ ಪ್ರಿಯತಮೇ
ಓ.... ಓ....ಓ ಪ್ರಿಯತಮಾ
ಓ.... ಓ....ಓ ಪ್ರಿಯತಮೇ
ಓ.... ಓ....ಓ ಪ್ರಿಯತಮಾ
ಓ.... ಓ....ಓ ಪ್ರಿಯತಮೇ
*********************************************************************************
ಬೆಳ್ಳಿ ಮೂಡಿತೋ
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ. ರಾಜ್ಕುಮಾರ್
ಟುರ್ರ್ರ್ರ್ರ್ರ್ರ್ರಾ..
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ಟ್ತೈತೆ
ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ಟ್ತೈತೆ
ಅಕ್ಕಿ ಹಾರುತಿದೆ ಕಿಚಿಪಿಚಿ ಎನ್ನುತಿದೆ
ಅಕ್ಕಿ ಹಾರುತಿದೆ ಕಿಚಿಪಿಚಿ ಎನ್ನುತಿದೆ
ಮಂಗ ಮರ ಏರುತಿದೆ ಆ ಕೊಂಬೆ ಈ ಕೊಂಬೆ ಎಗರುತಿದೆ
ಯಾಕ್ಲೇ ಹನ್ಮಂತಣ್ಣ ಗುರ್ಗುಡ್ತೀಯಾ
ಮಂಗ ಮರ ಏರುತಿದೆ ಆ ಕೊಂಬೆ ಈ ಕೊಂಬೆ ಎಗರುತಿದೆ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಆಕಾಸ್ದಾಗೆ ಬಣ್ಣ ಬಳಿದೋನ್ಯಾರು
ಈ ಬೆಟ್ಟ ಗುಡ್ಡಗಳ ಮಡುಗ್ದೋನ್ಯಾರು
ಮರದ ಮ್ಯಾಗೆ ಅಣ್ಣಾ ಇಟ್ಟೋನ್ಯಾರು
ಅಣ್ಣಾ ಒಳ್ಗೆ ರುಚಿಯ ತುಂಬ್ದೋನ್ಯಾರು
ಓಹೋಹೋ...ಹೋ ಆಹಾಹಾ...ಹಾಹಾ..ಹಾಹಾ..ಹಾ
ಓ ಕಾಳ....? ಬ್ಯಾಹ್ ಓ ಕರಿಯ...? ಬ್ಯಾಹ್
ಓ ಮುನಿಯ... ಓ ಮರಿಯ... ಓ ಕೆಂಚ.... ಓ ಜವರ...
ಇಂದು ಈ ಭೂಮಿ ಮ್ಯಾಗೆ ನನ್ನಾ ನಿಮ್ಮಾ ತಂದೋರ್ಯಾರು
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹಾ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬೀರಪ್ಪನು ಕುಂತಾನೆ ಗುಡಿಯಾ ಒಳಗೆ
ಬೇಡಿದ ವರ್ದಾನ ಕೊಡುವ ನಮಗೆ
ಬಕುತಾರನು ಕಂಡಾರೆ ಆಸೆ ಅವಗೆ
ಕೆಟ್ಟೋರ ಕಂಡಾರೆ ರೋಸ ಅವಗೆ
ಓಹೋಹೋ.. ಹೋಹೋ.. ಆಹಾಹಾ...
ಹಾಹಾ..ಹಾಹಾ..ಹಾ ಓ ಬೀರಾ...? ಬ್ಯಾಹ್
ಓ ಮಾರಾ...? ಬ್ಯಾಹ್ ಓ ನಂಜ.... ಓ ಕೆಂಪಾ....
ಬರ್ರೊಲೆ ಒತ್ತಾಯ್ತು ಹೊಟ್ಟೆ ಚುರುಗುಟ್ಟ್ತೈತೆ
ರಾಗಿಮುದ್ದೆ ಉಣ್ಣೋ ಒತ್ತು
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು ಬಾ... ಬಾ... ಟುರ್ರ್ ಟುರ್ರ್
ಏಯ್ ಸಂದಿಗೊಂದಿಯೊಳ್ಗೆಲ್ಲಾ ನುಗ್ತವಲ್ಲಪ್ಪಾ ಇವೂ..
ಏ ಬರ್ರೊಲೇ...ಏಯ್
ಟುರ್ರ ಟುರ್ರ ಟುರ್ರ್ರ್ರ್ರ್ರ್ರ್ರಾ
ಬಾ ಬಾ ಬಾ..
********************************************************************************
No comments:
Post a Comment